ಮುಂಬೈ: ತೌತೆ ಚಂಡಮಾರುತದ ಹೊಡೆತದಿಂದ ಅರಬ್ಬಿ ಸಮುದ್ರದಲ್ಲಿ ಮುಳುಗಿರುವ ‘ಪಿ305’ ಬಾರ್ಜ್ನಲ್ಲಿದ್ದವರ ಪೈಕಿ ಇನ್ನೂ 38 ಜನರು ನಾಪತ್ತೆಯಾಗಿದ್ದಾರೆ. ಇವರ ಪತ್ತೆಗಾಗಿ ನೌಕಾಪಡೆಯ ಹಡಗುಗಳು ಗುರುವಾರವೂ ಶೋಧಕಾರ್ಯವನ್ನು ಮುಂದುವರಿಸಿವೆ.
ನಾಪತ್ತೆಯಾಗಿರುವವರು ಜೀವಂತವಾಗಿ ಪತ್ತೆಯಾಗುವ ಭರವಸೆ ಕ್ಷೀಣಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಇಲ್ಲಿನ ಕರಾವಳಿಯಲ್ಲಿ ಶೋಧಕಾರ್ಯಕ್ಕೆನೌಕಾಪಡೆ ಗುರುವಾರ ಬೆಳಿಗ್ಗೆ ಪುನಃ ಚಾಲನೆ ನೀಡಿದೆ. ‘ಪಿ305’ ಬಾರ್ಜ್ ಚಂಡಮಾರುತಕ್ಕೆ ಸಿಲುಕಿದ್ದ ಸ್ಥಳದಲ್ಲಿ ಶೋಧ ಕಾರ್ಯವನ್ನು ಚುರುಕುಗೊಳಿಸಲಾಗಿದ್ದು, ಇದಕ್ಕಾಗಿ ಹೆಲಿಕಾಪ್ಟರ್ಗಳನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ಹೇಳಿವೆ.
‘ಪಿ305’ ಬಾರ್ಜ್ನಲ್ಲಿದ್ದ 261 ಜನರ ಪೈಕಿ 186 ಜನರನ್ನು ರಕ್ಷಿಸಲಾಗಿದೆ. 38 ಜನರು ನಾಪತ್ತೆಯಾಗಿದ್ದು, 37 ಜನರು ಮೃತಪಟ್ಟಿದ್ದಾರೆ. ವರಪ್ರದ ಬೋಟ್ನಲ್ಲಿದ್ದ ಇಬ್ಬರನ್ನು ಸಹ ನೌಕಾಪಡೆ ರಕ್ಷಿಸಿದೆ.