ಮುಂಬೈನ ಐಷಾರಾಮಿ ಹೊಟೇಲ್ನಿಂದ ವಿಧಾನ ಭವನದ ಆವರಣಕ್ಕೆ ಭಾರೀ ಭದ್ರತೆಯಲ್ಲಿ ಶಿವಸೇನಾ ಬಂಡಾಯ ಶಾಸಕರು ಭಾನುವಾರ ಬಂದಿಳಿದಿದ್ದಾರೆ.
ಬಂಡಾಯ ಶಾಸಕರಿಗೆ ನೀಡಿರುವ ಭದ್ರತಾ ವ್ಯವಸ್ಥೆ ವಿಚಾರವಾಗಿ ಏಕನಾಥಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವನ್ನು ಗುರಿಯಾಗಿಸಿ ಆದಿತ್ಯ ಠಾಕ್ರೆ ವಾಗ್ದಾಳಿ ನಡೆಸಿದ್ದಾರೆ.
‘ಮುಂಬೈನಲ್ಲಿ ನಾವು ಈ ಹಿಂದೆ ಇಂತಹ ಭದ್ರತೆಯನ್ನೇ ನೋಡಿರಲಿಲ್ಲ. ಭಯೋತ್ಪಾದಕ ಅಜ್ಮಲ್ ಕಸಬ್ಗೂ ಈ ರೀತಿಯ ಭದ್ರತೆ ನೀಡಿರಲಿಲ್ಲ. ನಿಮಗೇಕೆ ಇಷ್ಟೊಂದು ಭಯ?’ ಎಂದು ಶಿಂಧೆಗೆ ಪ್ರಶ್ನಿಸಿದ್ದಾರೆ.