‘ಬಾಕಿ ಉಳಿದಿರುವ ಹಣ ನೀಡದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅನ್ವಯ್ ಆರೋಪಿಗಳಿಗೆ ತಿಳಿಸಿದ್ದರು. ಈ ಬೆದರಿಕೆಯನ್ನು ಕಡೆಗಣಿಸಿದ್ದ ಆರೋಪಿಗಳು, ‘ಏನು ಬೇಕಾದರೂ ಮಾಡಿಕೊ’ ಎಂದಿದ್ದರು. ಬಾಕಿ ಉಳಿದಿರುವ ಹಣವ ಸಿಗದೇ ಇದ್ದ ಕಾರಣ ಅನ್ವಯ್ ಮಾನಸಿಕ ಒತ್ತಡದಲ್ಲಿದ್ದರು. ತನ್ನ ಉದ್ಯಮದಲ್ಲಿ ತಾಯಿಯೂ ಪಾಲುದಾರಳಾಗಿದ್ದ ಕಾರಣ, ತಾನು ಆತ್ಮಹತ್ಯೆ ಮಾಡಿಕೊಂಡರೆ ತಾಯಿಗೆ ಸಮಸ್ಯೆಯಾಗಬಹುದು ಎಂದು ಅನ್ವಯ್ ಅಂದುಕೊಂಡಿದ್ದರು. ಹೀಗಾಗಿ ತಾಯಿಯನ್ನು ಕೊಂದು, ನಂತರ ಆತ್ಮಹತ್ಯೆ ಪತ್ರ ಬರೆದು ನೇಣು ಹಾಕಿಕೊಂಡಿದ್ದರು. ಪತ್ರದಲ್ಲಿರುವ ನಾಯ್ಕ್ ಅವರದೇ ಕೈಬರಹ ಎಂದು ಗುರುತಿಸಲಾಗಿದೆ’ ಎಂದೂ 1,914 ಪುಟಗಳ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.