ಕೇರಳ ಚುನಾವಣೆ: ಯುಡಿಎಫ್ ಜತೆ ಮೈತ್ರಿಗೆ ಎಲ್ಡಿಎಫ್ ತೊರೆದ ಎನ್ಸಿಪಿ ಬಣ
ತಿರುವನಂತಪುರ: ಕೇರಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಆಡಳಿತಾರೂಢ ಎಲ್ಡಿಎಫ್ ಮೈತ್ರಿಕೂಟ ತೊರೆಯುವುದಾಗಿ ಎನ್ಸಿಪಿ ಬಣ ಘೋಷಿಸಿದೆ. ಮುಂದೆ ಯುಡಿಎಫ್ ಮೈತ್ರಿಕೂಟದ ಜತೆ ಕೈಜೋಡಿಸುವುದಾಗಿಯೂ ತಿಳಿಸಿದೆ.
ಕಾಂಗ್ರೆಸ್ನ ಹಿರಿಯ ನಾಯಕ ರಮೇಶ್ ಚೆನ್ನಿತಲ ಅವರು ಹಮ್ಮಿಕೊಂಡಿರುವ ‘ಐಶ್ವರ್ಯ ಕೇರಳ’ ಯಾತ್ರೆಯು ಭಾನುವಾರ ಕೋಟ್ಟಯಂನ ಪಾಲಾ ವಿಧಾನಸಭಾ ಕ್ಷೇತ್ರ ತಲುಪಲಿದೆ. ಆ ಸಂದರ್ಭ ಯಾತ್ರೆಯಲ್ಲಿ ಭಾಗವಹಿಸುವುದಾಗಿ ಎನ್ಸಿಪಿ ಬಣದ ನೇತೃತ್ವ ವಹಿಸಿರುವ ಶಾಸಕ ಮಣಿ ಸಿ. ಕಪ್ಪನ್ ಅವರು ತಿಳಿಸಿದ್ದಾರೆ. ಪಾಲಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ ಕಪ್ಪನ್.
ಓದಿ: ಸಾಮಾನ್ಯ ಜನತೆಯೇ ಬಿಜೆಪಿಯ ಆಪ್ತರು: ಕಾಂಗ್ರೆಸ್ಗೆ ನಿರ್ಮಲಾ ಸೀತಾರಾಮನ್ ತಿರುಗೇಟು
2019ರ ವಿಧಾನಸಭೆ ಉಪ ಚುನಾವಣೆಯಲ್ಲಿ ಕಪ್ಪನ್ ಅವರು ಪಾಲಾ ವಿಧಾನಸಭಾ ಕ್ಷೇತ್ರದಿಂದ ಎಲ್ಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದರು.
ಪಾಲಾ ವಿಧಾನಸಭಾ ಕ್ಷೇತ್ರವನ್ನು ಈಚೆಗೆ ಯುಡಿಎಫ್ ಮೈತ್ರಿಕೂಟ ತೊರೆದಿರುವ ಜೋಸ್ ಕೆ. ಮಣಿ ನೇತೃತ್ವದ ‘ಕೇರಳ ಕಾಂಗ್ರೆಸ್ (ಎಂ)’ಗೆ ಬಿಟ್ಟುಕೊಡುವ ಎಲ್ಡಿಎಫ್ ರಾಜ್ಯ ನಾಯಕತ್ವದ ವಿರುದ್ಧ ಕಪ್ಪನ್ ಬಂಡಾಯವೆದ್ದಿದ್ದಾರೆ.
ಓದಿ: ಐದು ದಶಕಗಳ ರಾಜಕೀಯ ಅನುಭವ: ಸಾಮರ್ಥ್ಯ, ಪಕ್ಷ ನಿಷ್ಠೆಗೆ ಹುಡುಕಿ ಬಂತು ಹುದ್ದೆ
ಆದಾಗ್ಯೂ, ಈ ಬೆಳವಣಿಗೆ ಕುರಿತು ಎನ್ಸಿಪಿಯ ರಾಷ್ಟ್ರೀಯ ನಾಯಕತ್ವವು ಪ್ರತಿಕ್ರಿಯಿಸಿಲ್ಲ. ಕಾಂಗ್ರೆಸ್ ನಾಯಕ, ಮಾಜಿ ಸಚಿವ ಕೆ.ಎಂ.ಮಣಿ ಅವರ ನಿಧನದಿಂದ ತೆರವಾಗಿದ್ದ ಪಾಲಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಪ್ಪನ್ ಅವರು ಕಾಂಗ್ರೆಸ್ ಅಭ್ಯರ್ಥಿ ಜೋಸ್ ಟಾಮ್ ವಿರುದ್ಧ ಜಯಗಳಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.