‘ಪೊಲೀಸರು, ಸಿಪಿಐ(ಎಂ) ನಾಯಕರು ಮತ್ತು ಮುಖ್ಯಮಂತ್ರಿ ಕಚೇರಿಯ ರಾಜಕೀಯ ಒತ್ತಡ ಮತ್ತು ಪ್ರಭಾವದಿಂದಾಗಿ, ಪ್ರತಿಭಟನಕಾರರ ಮೇಲೆ ಹಲ್ಲೆ ನಡೆಸಿರುವ ಜಯರಾಜನ್ಹೆಸರನ್ನು ವರದಿಯಿಂದ ಕೈಬಿಟ್ಟಿರುವುದು ಗಂಭೀರ ಅನುಮಾನ ಹುಟ್ಟುಹಾಕುತ್ತದೆ. ಇದನ್ನು ಗಮನಿಸಿ, ನ್ಯಾಯಯುತ ತನಿಖೆ ನಡೆಸಬೇಕು. ತನಿಖಾ ಸಂಸ್ಥೆಗಳು ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಜಿಡಿಸಿಎ) ವಸ್ತುನಿಷ್ಠ ವರದಿ ಸಲ್ಲಿಸಬೇಕು’ ಎಂದು ಸತೀಶನ್ ಅವರು ದ್ವಿವೇದಿಯವರಿಗೆ ಮನವಿ ಮಾಡಿದ್ದಾರೆ.