<p><strong>ಅಲಹಾಬಾದ್: </strong>ಪ್ರಯಾಗ್ರಾಜ್ ವಿಮಾನನಿಲ್ದಾಣಕ್ಕೆ ಮೀಸಲಾದ ಕಾರಿಡಾರ್ ಯೋಜನೆಗಾಗಿ ಸ್ಥಳೀಯ ಸಂಸ್ಥೆಯು ಕ್ಲಿನಿಕ್ ಮತ್ತು ರೆಸ್ಟೋರೆಂಟ್ ಅನ್ನು ಕೆಡವಲು ಯೋಜಿಸಿದ್ದ ಕಾರ್ಯಾಚರಣೆಗೆ ಅಲಹಾಬಾದ್ ಹೈಕೋರ್ಟ್ ಭಾನುವಾರ ತುರ್ತು ವಿಚಾರಣೆಯಲ್ಲಿ ತಡೆ ನೀಡಿದೆ.</p>.<p>ನ್ಯಾಯಮೂರ್ತಿಗಳಾದ ಪ್ರೀತಿಂಕರ್ ದಿವಾಕರ್ ಮತ್ತು ಅಶುತೋಷ್ ಶ್ರೀವಾಸ್ತವ ಅವರನ್ನೊಳಗೊಂಡ ಪೀಠವು ರಾಕೇಶ್ ಗುಪ್ತಾ ಮತ್ತು ಇತರ ಇಬ್ಬರು ಸಲ್ಲಿಸಿದ ಅರ್ಜಿಯ ಮೇರೆಗೆ ಈ ಆದೇಶವನ್ನು ನೀಡಿದೆ.</p>.<p>‘ಸ್ಥಳೀಯ ಸಂಸ್ಥೆಯು ಕಾರಿಡಾರ್ ಯೋಜನೆಗಾಗಿ ವಶಪಡಿಸಿಕೊಳ್ಳಲು ಯೋಜಿಸಿರುವ ಜಾಗದಲ್ಲಿ 100 ವರ್ಷಗಳಿಂದ ಹೋಮಿಯೊಪಥಿ ಕ್ಲಿನಿಕ್ ಮತ್ತು ರೆಸ್ಟೋರೆಂಟ್ ಅನ್ನು ಹೊಂದಿದ್ದೇವೆ. ಅಷ್ಟೇ ಅಲ್ಲ, ಆಸ್ತಿಗೆ ಮನೆ ಸಂಖ್ಯೆಯನ್ನೂ ನೀಡಲಾಗಿದೆ’ ಎಂದು ಅರ್ಜಿದಾರರು ನ್ಯಾಯಾಲಯದ ಮುಂದೆ ವಾದ ಮಂಡಿಸಿದರು.</p>.<p>ಅರ್ಜಿದಾರರು ಭೂಮಿಯನ್ನು ಹೇಗೆ ಅತಿಕ್ರಮಿಸಿದ್ದಾರೆ ಮತ್ತು ಅದನ್ನು ಏಕೆ ನೆಲಸಮಗೊಳಿಸಬೇಕು ಎಂಬುದನ್ನು ಫೆ. 24ಕ್ಕೆ ನಿಗದಿಪಡಿಸಿದ ಮುಂದಿನ ವಿಚಾರಣೆಯೊಳಗೆ ಮಾಹಿತಿ ನೀಡಬೇಕು ಎಂದು ನ್ಯಾಯಾಲಯವು, ಸಂಬಂಧಿಸಿದ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ಸೂಚನೆ ನೀಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಲಹಾಬಾದ್: </strong>ಪ್ರಯಾಗ್ರಾಜ್ ವಿಮಾನನಿಲ್ದಾಣಕ್ಕೆ ಮೀಸಲಾದ ಕಾರಿಡಾರ್ ಯೋಜನೆಗಾಗಿ ಸ್ಥಳೀಯ ಸಂಸ್ಥೆಯು ಕ್ಲಿನಿಕ್ ಮತ್ತು ರೆಸ್ಟೋರೆಂಟ್ ಅನ್ನು ಕೆಡವಲು ಯೋಜಿಸಿದ್ದ ಕಾರ್ಯಾಚರಣೆಗೆ ಅಲಹಾಬಾದ್ ಹೈಕೋರ್ಟ್ ಭಾನುವಾರ ತುರ್ತು ವಿಚಾರಣೆಯಲ್ಲಿ ತಡೆ ನೀಡಿದೆ.</p>.<p>ನ್ಯಾಯಮೂರ್ತಿಗಳಾದ ಪ್ರೀತಿಂಕರ್ ದಿವಾಕರ್ ಮತ್ತು ಅಶುತೋಷ್ ಶ್ರೀವಾಸ್ತವ ಅವರನ್ನೊಳಗೊಂಡ ಪೀಠವು ರಾಕೇಶ್ ಗುಪ್ತಾ ಮತ್ತು ಇತರ ಇಬ್ಬರು ಸಲ್ಲಿಸಿದ ಅರ್ಜಿಯ ಮೇರೆಗೆ ಈ ಆದೇಶವನ್ನು ನೀಡಿದೆ.</p>.<p>‘ಸ್ಥಳೀಯ ಸಂಸ್ಥೆಯು ಕಾರಿಡಾರ್ ಯೋಜನೆಗಾಗಿ ವಶಪಡಿಸಿಕೊಳ್ಳಲು ಯೋಜಿಸಿರುವ ಜಾಗದಲ್ಲಿ 100 ವರ್ಷಗಳಿಂದ ಹೋಮಿಯೊಪಥಿ ಕ್ಲಿನಿಕ್ ಮತ್ತು ರೆಸ್ಟೋರೆಂಟ್ ಅನ್ನು ಹೊಂದಿದ್ದೇವೆ. ಅಷ್ಟೇ ಅಲ್ಲ, ಆಸ್ತಿಗೆ ಮನೆ ಸಂಖ್ಯೆಯನ್ನೂ ನೀಡಲಾಗಿದೆ’ ಎಂದು ಅರ್ಜಿದಾರರು ನ್ಯಾಯಾಲಯದ ಮುಂದೆ ವಾದ ಮಂಡಿಸಿದರು.</p>.<p>ಅರ್ಜಿದಾರರು ಭೂಮಿಯನ್ನು ಹೇಗೆ ಅತಿಕ್ರಮಿಸಿದ್ದಾರೆ ಮತ್ತು ಅದನ್ನು ಏಕೆ ನೆಲಸಮಗೊಳಿಸಬೇಕು ಎಂಬುದನ್ನು ಫೆ. 24ಕ್ಕೆ ನಿಗದಿಪಡಿಸಿದ ಮುಂದಿನ ವಿಚಾರಣೆಯೊಳಗೆ ಮಾಹಿತಿ ನೀಡಬೇಕು ಎಂದು ನ್ಯಾಯಾಲಯವು, ಸಂಬಂಧಿಸಿದ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ಸೂಚನೆ ನೀಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>