ಮುಂಬೈ : ಇತ್ತೀಚೆಗೆ ತಮ್ಮ ಎಡಗಾಲಿನ ಮೀನಖಂಡದ ನರ ತುಂಡಾದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ಬಾಲಿವುಡ್ ನಟಅಮಿತಾಭ್ ಬಚ್ಚನ್ ಭಾನುವಾರ ಹೇಳಿದ್ದಾರೆ.
80ನೇ ವರ್ಷಕ್ಕೆ ಕಾಲಿಟ್ಟಿರುವ ಅವರು ತಮ್ಮ ಅಧಿಕೃತ ಬ್ಲಾಗ್ನಲ್ಲಿ ಈ ಸುದ್ದಿ ಹಂಚಿಕೊಂಡಿದ್ದಾರೆ. ರಕ್ತಸ್ರಾವ ನಿಯಂತ್ರಿಸಲು ಹೊಲಿಗೆಗಳನ್ನು ಹಾಕಲಾಗಿದೆ ಎಂದಿದ್ದಾರೆ.
‘ಲೋಹದ ತುಂಡು ನನ್ನ ಎಡ ಕಾಲಿನ ನರವನ್ನು ತುಂಡರಿಸಿತು. ರಕ್ತಸ್ರಾವ ತಡೆಯಲು ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿಸಿಬ್ಬಂದಿ ಸಹಕಾರದೊಂದಿಗೆ ವೈದ್ಯರ ತಂಡ ಹೊಲಿಗೆ ಹಾಕಿತು. ಕೆಲವು ದಿನಗಳು ನಡೆದಾಡಬಾರದು, ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ’ ಎಂದು ಬಚ್ಚನ್ ಬರೆದಿದ್ದಾರೆ.