ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತಾಭ್‌ ಬಚ್ಚನ್‌ ಎಡಗಾಲಿಗೆ ಹೊಲಿಗೆ

Last Updated 23 ಅಕ್ಟೋಬರ್ 2022, 13:56 IST
ಅಕ್ಷರ ಗಾತ್ರ

ಮುಂಬೈ : ಇತ್ತೀಚೆಗೆ ತಮ್ಮ ಎಡಗಾಲಿನ ಮೀನಖಂಡದ ನರ ತುಂಡಾದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ಬಾಲಿವುಡ್‌ ನಟಅಮಿತಾಭ್‌ ಬಚ್ಚನ್ ಭಾನುವಾರ ಹೇಳಿದ್ದಾರೆ.

80ನೇ ವರ್ಷಕ್ಕೆ ಕಾಲಿಟ್ಟಿರುವ ಅವರು ತಮ್ಮ ಅಧಿಕೃತ ಬ್ಲಾಗ್‌ನಲ್ಲಿ ಈ ಸುದ್ದಿ ಹಂಚಿಕೊಂಡಿದ್ದಾರೆ. ರಕ್ತಸ್ರಾವ ನಿಯಂತ್ರಿಸಲು ಹೊಲಿಗೆಗಳನ್ನು ಹಾಕಲಾಗಿದೆ ಎಂದಿದ್ದಾರೆ.

‘ಲೋಹದ ತುಂಡು ನನ್ನ ಎಡ ಕಾಲಿನ ನರವನ್ನು ತುಂಡರಿಸಿತು. ರಕ್ತಸ್ರಾವ ತಡೆಯಲು ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿಸಿಬ್ಬಂದಿ ಸಹಕಾರದೊಂದಿಗೆ ವೈದ್ಯರ ತಂಡ ಹೊಲಿಗೆ ಹಾಕಿತು. ಕೆಲವು ದಿನಗಳು ನಡೆದಾಡಬಾರದು, ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ’ ಎಂದು ಬಚ್ಚನ್ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT