ಪ್ರತಿಭಟನೆ ನಂತರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಂಘದ ಮುಖಂಡ ವಾಸಿಮ್ ಅಲಿ ಮನವಿ ಪತ್ರಗಳನ್ನು ಮಾಧ್ಯಮದವರಿಗೆ ನೀಡಿದರು. ವಿದ್ಯಾರ್ಥಿ ಸಂಘದ ಮಾಜಿ ಕಾರ್ಯದರ್ಶಿ ಹುಜೈಫ್ ಅಮೀರ್ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ತಮ್ಮ ಪಕ್ಷದ ಸದಸ್ಯ ಅಜಂ ಖಾನ್ ಅವರ ಬೆಂಬಲಕ್ಕೆ ನಿಲ್ಲದೆ ಇರುವ ಬಗ್ಗೆ ವಿ.ವಿಯ ವಿದ್ಯಾರ್ಥಿಗಳು ತುಂಬಾ ಬೇಸರಗೊಂಡಿದ್ದಾರೆ‘ ಎಂದು ಹೇಳಿದರು.