ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಚುನಾವಣೆ| ಜೆಡಿಯು ಸೇರಿದ ಆರ್‌ಜೆಡಿ ಶಾಸಕ

Last Updated 1 ಸೆಪ್ಟೆಂಬರ್ 2020, 13:41 IST
ಅಕ್ಷರ ಗಾತ್ರ

ಪಟಣಾ: ಬಿಹಾರದಲ್ಲಿ ಆರ್‌ಜೆಡಿ–ಕಾಂಗ್ರೆಸ್‌ ನೇತೃತ್ವದ ಮಹಾಘಟಬಂಧಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಆರ್‌ಜೆಡಿಯ ಶಾಸಕ ಬಿರೇಂದ್ರ ಕುಮಾರ್‌ ಅವರು ಮಂಗಳವಾರ ಎನ್‌ಡಿಎ ಮೈತ್ರಿಕೂಟದ ಜೆಡಿಯು ಸೇರಿದ್ದಾರೆ.

ಇದರೊಂದಿಗೆ ಕಳೆದ ಹದಿನೈದು ದಿನಗಳಿಂದ ಈಚೆಗೆ ಆರ್‌ಜೆಡಿಯ 7 ಶಾಸಕರು ಜೆಡಿಯು ಸೇರಿದಂತಾಗಿದೆ.

ಬಿರೇಂದ್ರ ಕುಮಾರ್‌ ಅವರನ್ನು ಪಕ್ಷಕ್ಕೆ ಸ್ವಾಗತಿಸಿರುವ ಜೆಡಿಯು ಹಿರಿಯ ನಾಯಕ ಮತ್ತು ಸಂಸದ ರಾಜೀವ್ ರಂಜನ್ ಸಿಂಗ್ (ಲಲನ್ ಸಿಂಗ್) ಕುಮಾರ್‌ ಆಗಮನದೊಂದಿಗೆ ಜೆಡಿಯುನ ಶಕ್ತಿ ಮತ್ತಷ್ಟು ಹೆಚ್ಚಿದೆ ಎಂದಿದ್ದಾರೆ. ಅಕ್ಟೋಬರ್–ನವೆಂಬರ್‌ನಲ್ಲಿ ಬಿಹಾರದ ವಿಧಾನಸಭೆಗೆ ಚುನಾವಣೆಗಳು ನಡೆಯಲಿವೆ.

‘ಬಿಹಾರದಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿ ಕೈಗೊಂಡಿರುವ ನಿತೀಶ್‌ ಅವರ ಕಾರ್ಯಗಳನ್ನು ಮೆಚ್ಚಿ ಜೆಡಿಯು ಸೇರುತ್ತಿದ್ದೇನೆ’ ಎಂದು ಟೆಘ್ರಾ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಬಿರೇಂದ್ರ ಕುಮಾರ್‌ ಹೇಳಿದ್ದಾರೆ.

ಕಳೆದ ತಿಂಗಳು ಆರ್‌ಜೆಡಿ ಮೂವರು ಶಾಸಕರನ್ನು ಪಕ್ಷದಿಂದ ಉಚ್ಛಾಟಿಸಿತ್ತು. ಅವರೆಲ್ಲರೂ ಜೆಡಿಯು ಸೇರಿದ್ದರು. ನಂತರ ಲಾಲು ಸಂಬಂಧಿಯೂ ಆಗಿರುವ ಚಂದ್ರಿಕ ರಾಯ್‌ (ರಾಯ್‌ ಪುತ್ರಿ ಮತ್ತು ಲಾಲು ಪುತ್ರ ತೇಜ್‌ಪ್ರತಾಪ್‌ ನಡುವೆ ವೈವಾಹಿಕ ವಿವಾದವಿದೆ) ಸೇರಿದಂತೆ ಮೂವರು ಆರ್‌ಜೆಡಿ ತೊರೆದು ಜೆಡಿಯು ಸೇರ್ಪಡೆಯಾದರು. ಈಗ ಬಿರೇಂದ್ರ ಯಾದವ್‌ ಅವರು ಆರ್‌ಜೆಡಿಯಿಂದ ಹೊರ ಹೋಗಿದ್ದಾರೆ. ಈ ಮೂಲಕ ಚುನಾವಣೆಗೂ ಮೊದಲೇ ಘಟಬಂಧನಕ್ಕೆ ಬಿಹಾರದಲ್ಲಿ ಆಘಾತ ಎದುರಾಗಿದೆ.

ಬಿಹಾರದ ಮಹಾಘಟಬಂಧನದಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆಗೆ, ಕೇಂದ್ರದ ಮಾಜಿ ಸಚಿವ ಉಪೇಂದ್ರ ಕುಶ್ವಾಹ ಅವರ ಆರ್‌ಎಲ್‌ಎಸ್‌ಪಿ ಮತ್ತು ಬಾಲಿವುಡ್‌ ಚಿತ್ರ ನಿರ್ಮಾಣ ತಂತ್ರಜ್ಞ ಮುಖೇಶ್ ಸಾಹ್ನಿ ಅವರ ವಿಕಾಶೀಲ ಇನ್ಸಾನ್ ಪಾರ್ಟಿ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT