ಕಳೆದ ತಿಂಗಳು ಆರ್ಜೆಡಿ ಮೂವರು ಶಾಸಕರನ್ನು ಪಕ್ಷದಿಂದ ಉಚ್ಛಾಟಿಸಿತ್ತು. ಅವರೆಲ್ಲರೂ ಜೆಡಿಯು ಸೇರಿದ್ದರು. ನಂತರ ಲಾಲು ಸಂಬಂಧಿಯೂ ಆಗಿರುವ ಚಂದ್ರಿಕ ರಾಯ್ (ರಾಯ್ ಪುತ್ರಿ ಮತ್ತು ಲಾಲು ಪುತ್ರ ತೇಜ್ಪ್ರತಾಪ್ ನಡುವೆ ವೈವಾಹಿಕ ವಿವಾದವಿದೆ) ಸೇರಿದಂತೆ ಮೂವರು ಆರ್ಜೆಡಿ ತೊರೆದು ಜೆಡಿಯು ಸೇರ್ಪಡೆಯಾದರು. ಈಗ ಬಿರೇಂದ್ರ ಯಾದವ್ ಅವರು ಆರ್ಜೆಡಿಯಿಂದ ಹೊರ ಹೋಗಿದ್ದಾರೆ. ಈ ಮೂಲಕ ಚುನಾವಣೆಗೂ ಮೊದಲೇ ಘಟಬಂಧನಕ್ಕೆ ಬಿಹಾರದಲ್ಲಿ ಆಘಾತ ಎದುರಾಗಿದೆ.