ಕಥುವಾ, ಜಮ್ಮು ಮತ್ತು ಕಾಶ್ಮೀರ: ಸೇನೆಯ ಹೆಲಿಕಾಪ್ಟರ್ ಮಂಗಳವಾರ ಬೆಳಿಗ್ಗೆ 10.30ರಲ್ಲಿ ಅಪಘಾತಕ್ಕೆ ಗುರಿಯಾಗಿದ್ದು, ಇಲ್ಲಿನ ರಂಜಿತ್ ಸಾಗರ್ ಅಣೆಕಟ್ಟೆಯ ಸರೋವರಕ್ಕೆ ಬಿದ್ದಿದೆ. ಅದನ್ನು ಪತ್ತೆ ಮಾಡುವ ಕಾರ್ಯಾಚರಣೆ ಚುರುಕಿನಿಂದ ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಂಜಾಬ್ನ ಪಠಾಣ್ಕೋಟ್ನಿಂದ 30 ಕಿ.ಮೀ ದೂರದಲ್ಲಿ ಈ ಅಣೆಕಟ್ಟು ಇದ್ದು, ಸುಮಾರು 200 ಅಡಿ ಅಳವಿದೆ. ಕಥುವಾದ ಪೊಲೀಸ್ ವರಿಷ್ಠಾಧಿಕಾರಿ ಆರ್.ಸಿ.ಕೊತ್ವಾಲ್ ಅವರು, ಪತ್ತೆ ಕಾರ್ಯಾಚರಣೆಗೆ ಬೋಟ್ಗಳನ್ನು ಬಳಸಲಾಗಿದೆ. ಹೆಲಿಕಾಪ್ಟರ್ನ ಕೆಲ ಅವಶೇಷಗಳು ಪತ್ತೆಯಾಗಿವೆ ಎಂದು ತಿಳಿಸಿದರು.
ಹೆಲಿಕಾಪ್ಟರ್ನಲ್ಲಿ ಎಷ್ಟು ಜನರಿದ್ದರು, ಅವರಿಗೆ ಏನು ಆಗಿದೆ ಎಂಬುದನ್ನು ಈ ಹಂತದಲ್ಲಿ ಹೇಳಲಾಗದು ಎಂದು ಅವರು ತಿಳಿಸಿದರು. ವರದಿಯೊಂದರ ಪ್ರಕಾರ, ಹೆಲಿಕಾಪ್ಟರ್ನಲ್ಲಿ ಇಬ್ಬರು ಇದ್ದರು.