ಮೀರತ್ನಲ್ಲಿ ‘ಕಿಸಾನ್ ಮಹಾಪಂಚಾಯತ್’ ಉದ್ದೇಶಿಸಿ ಮಾತನಾಡಿದ ಅವರು, ‘ಕೆಂಪುಕೋಟೆಯ ಇಡೀ ಘಟನೆಗೆ ಅವರಿಂದಲೇ (ಮೋದಿ ಸರ್ಕಾರ) ಸಂಚು ರೂಪಿಸಲಾಗಿದೆ. ದೆಹಲಿಯ ಮಾರ್ಗ ತಿಳಿಯದವರಿಗೆ ಉದ್ದೇಶಪೂರ್ವಕ ತಪ್ಪು ಹಾದಿ ತೋರಿಸಲಾಗಿದೆ ಎಂದು ಅನೇಕ ಜನ ನನಗೆ ತಿಳಿಸಿದ್ದಾರೆ. ಅಲ್ಲಿ (ಕೆಂಪುಕೋಟೆಯಲ್ಲಿ) ಧ್ವಜ ಹಾರಿಸಿದ್ದು ಅವರ (ಬಿಜೆಪಿ) ಕಾರ್ಯಕರ್ತರು. ನಮ್ಮ ರೈತರು ಏನೇ ಮಾಡಿದರೂ ರಾಷ್ಟ್ರ ವಿರೋಧಿಗಳಲ್ಲ’ ಎಂದು ಹೇಳಿದ್ದಾರೆ.