ಪ್ರಕರಣ ವರ್ಗಾವಣೆ ಕುರಿತು ಎನ್ಸಿಬಿ ಘೋಷಣೆ ಮಾಡಿದ ಬಳಿಕ, ಎನ್ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಈ ಕುರಿತು ಎಎನ್ಐಗೆ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮನ್ನು ತನಿಖಾ ತಂಡದಿಂದ ತೆಗೆದು ಹಾಕಿಲ್ಲ. ಆದರೆ ಪ್ರಕರಣವನ್ನು ದೆಹಲಿ ಮತ್ತು ಮುಂಬಯಿ ತಂಡಗಳು ಜಂಟಿಯಾಗಿ ತನಿಖೆ ನಡೆಸಲಿವೆ ಎಂದು ಸಮೀರ್ ವಾಂಖೆಡೆ ತಿಳಿಸಿದ್ದಾರೆ.