<p><strong>ಶ್ರೀನಗರ: </strong>'ಕೋವಿಡ್ 19' ಸಾಂಕ್ರಾಮಿಕದ ಕಾರಣದಿಂದ ಸುಮಾರು ಹನ್ನೊಂದು ತಿಂಗಳ ಕಾಲ ಬಂದ್ ಆಗಿದ್ದ ಕಣಿವೆ ರಾಜ್ಯದ ಕಾಶ್ಮೀರದಲ್ಲಿ ರೈಲು ಸೇವೆಗಳು ಇದೇ 17 ರಿಂದ ಪುನರಾರಂಭವಾಗುವ ಸಾಧ್ಯತೆ ಇದೆ.</p>.<p>ಮೂಲಗಳ ಪ್ರಕಾರ, ಕೊರೊನಾ ಸೋಂಕಿನ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವ ಕಾರಣ ರೈಲ್ವೆ ಇಲಾಖೆ ಫೆಬ್ರುವರಿ 17 ರಿಂದ ಸ್ಥಗಿತಗೊಂಡಿರುವ ರೈಲು ಸೇವೆಗಳನ್ನು ಆರಂಭಿಸಲು ಸಿದ್ಧತೆ ನಡೆಸುತ್ತಿದೆ. ಕೆಲವೇ ದಿನಗಳಲ್ಲಿ ‘ಕೋವಿಡ್ 19 ಸಾಂಕ್ರಾಮಿಕ ಪ್ರಮಾಣಿತ ಕಾರ್ಯಸೂಚಿ‘(ಎಸ್ಒಪಿ)ಯನ್ನು ಬಿಡುಗಡೆ ಮಾಡಲಿದೆ.</p>.<p>‘ಸರ್ಕಾರ, ಕೋವಿಡ್–19ಗೆ ಸಂಬಂಧಿಸಿದ ಎಸ್ಒಪಿ ಸಿದ್ಧಪಡಿಸಿದರೆ, ರೈಲು ಸೇವೆಗಳು ಆರಂಭವಾ ಗುತ್ತವೆ‘ ಎಂದು ರೈಲ್ವೆ ಇಲಾಖೆಯ ಮುಖ್ಯ ವ್ಯವಸ್ಥಾಪಕ ಸಾಖಿಬ್ ಯೂಸುಫ್ ತಿಳಿಸಿದ್ದಾರೆ. ರೈಲು ಸೇವೆ ಸ್ಥಗಿತೊಳಿಸಿರುವುದರಿಂದ ರೈಲ್ವೆ ಇಲಾಖೆಗೆ ಸಾಕಷ್ಟು ನಷ್ಟವಾಗಿದೆ. ಆದರೆ, ಜನರ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಬೇಕಾಯಿತು‘ ಎಂದು ಅವರು ಹೇಳಿದ್ದಾರೆ.</p>.<p>ಸಾಮಾನ್ಯ ದಿನದಲ್ಲಿ ಉತ್ತರ ಕಾಶ್ಮೀರದ ಬಾರಾಮುಲ್ಲಾದಿಂದ ಜಮ್ಮುವಿನ ಬನಿಹಾಲ್(138 ಕಿ.ಮೀ) ಮಾರ್ಗದಲ್ಲಿ ನಿತ್ಯ ಕನಿಷ್ಠ 15 ರೈಲುಗಳು ನಿಯಮಿತವಾಗಿ ಸಂಚರಿಸುತ್ತವೆ. ಈ ರೈಲುಗಳು ನಿತ್ಯ ವಿದ್ಯಾರ್ಥಿಗಳು ಮತ್ತು ನೌಕರರು ಸೇರಿದಂತೆ ಸುಮಾರು 30 ಸಾವಿರ ಪ್ರಯಾಣಿಕರನ್ನು ಕರೆದೊಯ್ಯುತ್ತವೆ.</p>.<p>ಹನ್ನೊಂದು ತಿಂಗಳಿನಿಂದ ರೈಲು ಸಂಚಾರ ಸ್ಥಗಿತಗೊಂಡ ಪರಿಣಾಮ ಪ್ರಯಾಣಿಕರು ತೀವ್ರ ಪರದಾಡುತ್ತಿದ್ದಾರೆ. ಅದರಲ್ಲೂ ಪ್ರತಿದಿನ ಶ್ರೀನಗರಕ್ಕೆ ಪ್ರಯಾಣಿಸಬೇಕಾದ ಉತ್ತರ ಮತ್ತು ದಕ್ಷಿಣ ಕಾಶ್ಮೀರದ ಸಾವಿರಾರು ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.</p>.<p>‘ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಆರಂಭವಾಗುತ್ತಿದ್ದಂತೆ ಸರ್ಕಾರ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ನಿರ್ಧರಿಸಿತು. ಆದರೆ ರೈಲು ಸೇವೆಗಳನ್ನು ಮಾತ್ರ ಏಕೆ ಸ್ಥಗಿತಗೊಳಿಸಬೇಕು‘ ಎಂದು ಸರ್ಕಾರಿ ಉದ್ಯೋಗಿ ರೈಸ್ ಅಹ್ಮದ್ ಪ್ರಶ್ನಿಸುತ್ತಾರೆ.</p>.<p>‘ರೈಲು ಸೇವೆಗಳನ್ನು ಪುನರಾರಂಭಿಸಿದರೆ, ಚಳಿಗಾಲದಲ್ಲಿ ಅಪಾಯದ ಮಾರ್ಗವಾಗಿರುವ ಖಾಜಿಗುಂಡ್– ಬನಿಹಾಲ್ ಮಾರ್ಗವನ್ನು ಬಿಟ್ಟು, ರೈಲಿನಲ್ಲಿ ಸಂಚರಿಸುತ್ತಾರೆ. ಆಗ ಶ್ರೀನಗರ ಮತ್ತು ಜಮ್ಮು ನಗರದ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ‘ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.</p>.<p>ಕಳೆದ ವರ್ಷ ಆಗಸ್ಟ್ 5 ರಂದು, ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ, ಸುಮಾರು ನೂರು ದಿನಗಳವರೆಗೆ ಇದೇ ಬನಿಹಾಲ್ – ಬಾರಾಮುಲ್ಲಾ ನಡುವಿನ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. ನವೆಂಬರ್ 11,2019ರಂದು ರೈಲು ಸೇವೆ ಪುನರಾರಂಭಗೊಂಡಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ: </strong>'ಕೋವಿಡ್ 19' ಸಾಂಕ್ರಾಮಿಕದ ಕಾರಣದಿಂದ ಸುಮಾರು ಹನ್ನೊಂದು ತಿಂಗಳ ಕಾಲ ಬಂದ್ ಆಗಿದ್ದ ಕಣಿವೆ ರಾಜ್ಯದ ಕಾಶ್ಮೀರದಲ್ಲಿ ರೈಲು ಸೇವೆಗಳು ಇದೇ 17 ರಿಂದ ಪುನರಾರಂಭವಾಗುವ ಸಾಧ್ಯತೆ ಇದೆ.</p>.<p>ಮೂಲಗಳ ಪ್ರಕಾರ, ಕೊರೊನಾ ಸೋಂಕಿನ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವ ಕಾರಣ ರೈಲ್ವೆ ಇಲಾಖೆ ಫೆಬ್ರುವರಿ 17 ರಿಂದ ಸ್ಥಗಿತಗೊಂಡಿರುವ ರೈಲು ಸೇವೆಗಳನ್ನು ಆರಂಭಿಸಲು ಸಿದ್ಧತೆ ನಡೆಸುತ್ತಿದೆ. ಕೆಲವೇ ದಿನಗಳಲ್ಲಿ ‘ಕೋವಿಡ್ 19 ಸಾಂಕ್ರಾಮಿಕ ಪ್ರಮಾಣಿತ ಕಾರ್ಯಸೂಚಿ‘(ಎಸ್ಒಪಿ)ಯನ್ನು ಬಿಡುಗಡೆ ಮಾಡಲಿದೆ.</p>.<p>‘ಸರ್ಕಾರ, ಕೋವಿಡ್–19ಗೆ ಸಂಬಂಧಿಸಿದ ಎಸ್ಒಪಿ ಸಿದ್ಧಪಡಿಸಿದರೆ, ರೈಲು ಸೇವೆಗಳು ಆರಂಭವಾ ಗುತ್ತವೆ‘ ಎಂದು ರೈಲ್ವೆ ಇಲಾಖೆಯ ಮುಖ್ಯ ವ್ಯವಸ್ಥಾಪಕ ಸಾಖಿಬ್ ಯೂಸುಫ್ ತಿಳಿಸಿದ್ದಾರೆ. ರೈಲು ಸೇವೆ ಸ್ಥಗಿತೊಳಿಸಿರುವುದರಿಂದ ರೈಲ್ವೆ ಇಲಾಖೆಗೆ ಸಾಕಷ್ಟು ನಷ್ಟವಾಗಿದೆ. ಆದರೆ, ಜನರ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಬೇಕಾಯಿತು‘ ಎಂದು ಅವರು ಹೇಳಿದ್ದಾರೆ.</p>.<p>ಸಾಮಾನ್ಯ ದಿನದಲ್ಲಿ ಉತ್ತರ ಕಾಶ್ಮೀರದ ಬಾರಾಮುಲ್ಲಾದಿಂದ ಜಮ್ಮುವಿನ ಬನಿಹಾಲ್(138 ಕಿ.ಮೀ) ಮಾರ್ಗದಲ್ಲಿ ನಿತ್ಯ ಕನಿಷ್ಠ 15 ರೈಲುಗಳು ನಿಯಮಿತವಾಗಿ ಸಂಚರಿಸುತ್ತವೆ. ಈ ರೈಲುಗಳು ನಿತ್ಯ ವಿದ್ಯಾರ್ಥಿಗಳು ಮತ್ತು ನೌಕರರು ಸೇರಿದಂತೆ ಸುಮಾರು 30 ಸಾವಿರ ಪ್ರಯಾಣಿಕರನ್ನು ಕರೆದೊಯ್ಯುತ್ತವೆ.</p>.<p>ಹನ್ನೊಂದು ತಿಂಗಳಿನಿಂದ ರೈಲು ಸಂಚಾರ ಸ್ಥಗಿತಗೊಂಡ ಪರಿಣಾಮ ಪ್ರಯಾಣಿಕರು ತೀವ್ರ ಪರದಾಡುತ್ತಿದ್ದಾರೆ. ಅದರಲ್ಲೂ ಪ್ರತಿದಿನ ಶ್ರೀನಗರಕ್ಕೆ ಪ್ರಯಾಣಿಸಬೇಕಾದ ಉತ್ತರ ಮತ್ತು ದಕ್ಷಿಣ ಕಾಶ್ಮೀರದ ಸಾವಿರಾರು ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.</p>.<p>‘ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಆರಂಭವಾಗುತ್ತಿದ್ದಂತೆ ಸರ್ಕಾರ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ನಿರ್ಧರಿಸಿತು. ಆದರೆ ರೈಲು ಸೇವೆಗಳನ್ನು ಮಾತ್ರ ಏಕೆ ಸ್ಥಗಿತಗೊಳಿಸಬೇಕು‘ ಎಂದು ಸರ್ಕಾರಿ ಉದ್ಯೋಗಿ ರೈಸ್ ಅಹ್ಮದ್ ಪ್ರಶ್ನಿಸುತ್ತಾರೆ.</p>.<p>‘ರೈಲು ಸೇವೆಗಳನ್ನು ಪುನರಾರಂಭಿಸಿದರೆ, ಚಳಿಗಾಲದಲ್ಲಿ ಅಪಾಯದ ಮಾರ್ಗವಾಗಿರುವ ಖಾಜಿಗುಂಡ್– ಬನಿಹಾಲ್ ಮಾರ್ಗವನ್ನು ಬಿಟ್ಟು, ರೈಲಿನಲ್ಲಿ ಸಂಚರಿಸುತ್ತಾರೆ. ಆಗ ಶ್ರೀನಗರ ಮತ್ತು ಜಮ್ಮು ನಗರದ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ‘ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.</p>.<p>ಕಳೆದ ವರ್ಷ ಆಗಸ್ಟ್ 5 ರಂದು, ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ, ಸುಮಾರು ನೂರು ದಿನಗಳವರೆಗೆ ಇದೇ ಬನಿಹಾಲ್ – ಬಾರಾಮುಲ್ಲಾ ನಡುವಿನ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. ನವೆಂಬರ್ 11,2019ರಂದು ರೈಲು ಸೇವೆ ಪುನರಾರಂಭಗೊಂಡಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>