ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಮಾಂಸ ಸೇವನೆ ತ್ಯಜಿಸುವಂತೆ ಅಸ್ಸಾಂ ಮುಸ್ಲಿಮರಿಗೆ ಕರೆ ನೀಡುವೆ: ಬದ್ರುದ್ದೀನ್

Last Updated 7 ಸೆಪ್ಟೆಂಬರ್ 2021, 11:55 IST
ಅಕ್ಷರ ಗಾತ್ರ

ಗುವಾಹಟಿ: ಗೋಮಾಂಸ ಸೇವನೆ ಬಿಟ್ಟುಬಿಡುವಂತೆ ಅಸ್ಸಾಂನ ಮುಸ್ಲಿಮರಲ್ಲಿ ಮನವಿ ಮಾಡುವುದಾಗಿ ಎಐಯುಡಿಎಫ್‌ ಮುಖ್ಯಸ್ಥ ಮೌಲಾನಾ ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ. ಇದರಿಂದ ಗೋಮಾಂಸ ಮಾರಾಟ ಮತ್ತು ಸೇವನೆ ನಿಯಂತ್ರಿಸಲು ಮುಂದಾಗಿರುವ ಬಿಜೆಪಿ ಸರ್ಕಾರಕ್ಕೆ ನೆರವಾಗಬಹುದು ಎನ್ನಲಾಗಿದೆ.

ಆಗಸ್ಟ್ 13ರಂದು ಅನುಮೋದನೆ ಪಡೆಯಲಾಗಿರುವ ‘ಅಸ್ಸಾಂ ಜಾನುವಾರು ರಕ್ಷಣಾ ಕಾಯ್ದೆ 2021’ರ ಬಗ್ಗೆ ಅಜ್ಮಲ್ ಬಳಿ ಪ್ರತಿಕ್ರಿಯೆ ಕೋರಲಾಗಿತ್ತು. ಇದಕ್ಕೆ ಉತ್ತರಿಸಿದ ಅವರು, ಗೋಮಾಂಸ ಸೇವನೆ ತ್ಯಜಿಸುವಂತೆ ಅಸ್ಸಾಂನ ಮುಸ್ಲಿಮರಲ್ಲಿ ಮನವಿ ಮಾಡುವೆ ಎಂದಷ್ಟೇ ಹೇಳಬಲ್ಲೆ’ ಎಂದು ಹೇಳಿದ್ದಾರೆ.

ಹಿಂದೂ ಮತ್ತು ಇತರ ಗೋಮಾಂಸ ಸೇವನೆ ಮಾಡದ ಸಮುದಾಯದವರ ಪ್ರಾಬಲ್ಯ ಇರುವ ಪ್ರದೇಶದ, ದೇಗುಲ, ಹಿಂದೂ ಧಾರ್ಮಿಕ ಸಂಸ್ಥೆಗಳ 5 ಕಿ.ಮೀ ವ್ಯಾಪ್ತಿಯಲ್ಲಿ ಗೋಮಾಂಸ ಮಾರಾಟ, ಸೇವನೆ ನಿಷೇಧಿಸುವ ಬಗ್ಗೆ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಇತರ ರಾಜ್ಯಗಳಿಗೆ ಮತ್ತು ಇತರ ರಾಜ್ಯಗಳಿಂದ ಅಸ್ಸಾಂಗೆ ಜಾನುವಾರು ಸಾಗಾಟವನ್ನು ಕಾಯ್ದೆ ನಿಷೇಧಿಸುತ್ತದೆ. ಅನುಮತಿ ಇಲ್ಲದೆ ಇತರ ರಾಜ್ಯಗಳಿಂದ ಅಸ್ಸಾಂ ಮೂಲಕ ಬೇರೆ ರಾಜ್ಯಗಳಿಗೆ ಗೋಮಾಂಸ ಮಾರಾಟ ಮಾಡುವುದನ್ನೂ ನಿಷೇಧಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT