ಕೋಲ್ಕತಾ:‘ಬಾಂಗ್ಲಾ ನಿಜರ್ ಮೆಯೆಕ್ಕೆ ಚಾಯೆ‘ (ಬಂಗಾಳ ತನ್ನದೇ ಮಗಳನ್ನು ಬಯಸುತ್ತದೆ) – ಇದು ತೃಣಮೂಲ ಕಾಂಗ್ರೆಸ್ ಪಕ್ಷದ ಮುಂಬರುವ ವಿಧಾನಸಭಾ ಚುನಾವಣೆಯ ಘೋಷಣೆ.
ಪಶ್ಚಿಮ ಬಂಗಾಳದಲ್ಲೀಗ ರಾಜ್ಯದ ಒಳಗಿನವರ ಮತ್ತು ಹೊರಗಿನವರು ಎಂಬುದರ ಕುರಿತು ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಬಂಗಾಳದ ಮಗಳಾಗಿ ಬಿಂಬಿಸಲು ಟಿಎಂಸಿ ಶನಿವಾರ ಈ ಘೋಷಣೆ ಪ್ರಕಟಿಸಿದೆ.
ಪಕ್ಷದ ಘೋಷಣೆ ಪ್ರಕಟಿಸಿದ ನಂತರ, ಬಂಗಾಳಿ ಭಾಷೆಯಲ್ಲಿರುವ ಘೋಷಣೆಯನ್ನು ಭಾಷಾಂತರಸಿ, ಆ ಘೋಷಣೆ ಜತೆಗೆ, ಮಮತಾ ಬ್ಯಾನರ್ಜಿ ಅವರ ಚಿತ್ರವನ್ನೊಳಗೊಂಡ ಫಲಕಗಳನ್ನು ನಗರದ ಟಿಎಂಸಿ ಕಚೇರಿ ಸೇರಿದಂತೆ ಕೋಲ್ಕತ್ತಾದಾದ್ಯಂತ ಹಾಕಲಾಗಿದೆ.