ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಾಂತ್ ಕಿಶೋರ್ ಹೇಳಿಕೆಗೆ ಪ್ರಾಮುಖ್ಯತೆ ನೀಡುವುದಿಲ್ಲ: ನಿತೀಶ್ ಕುಮಾರ್

Last Updated 6 ಮೇ 2022, 14:11 IST
ಅಕ್ಷರ ಗಾತ್ರ

ಪಟ್ನಾ (ಪಿಟಿಐ): ‘ಬಿಹಾರದಲ್ಲಿ ನನ್ನ ನೇತೃತ್ವದ ಆಡಳಿತವನ್ನು ಕುರಿತಂತೆ ರಾಜಕೀಯ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ನೀಡಿರುವ ಹೇಳಿಕೆಗೆ ನಾನು ಅಷ್ಟು ಪ್ರಾಮುಖ್ಯತೆ ನೀಡುವುದಿಲ್ಲ’ ಎಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

‘ಜನ್ ಸುರಾಜ್‌’ ವೇದಿಕೆಯನ್ನು ಆರಂಭಿಸಿರುವ ಪ್ರಶಾಂತ್‌ ಕಿಶೋರ್, ‘ಬಿಹಾರದಲ್ಲಿ ಪರಿವರ್ತನೆ ತರುವುದು, ರಾಜ್ಯದಲ್ಲಿ ರಾಜಕೀಯವಾಗಿ ಪರ್ಯಾಯವನ್ನು ನೀಡುವುದು ತಮ್ಮ ಉದ್ದೇಶ ಎಂದು ಹೇಳಿದ್ದರು.

‘ಯಾರೋ ಏನೋ ಹೇಳಿದ್ದಕ್ಕೆ ನಾನು ಪ್ರಾಮುಖ್ಯತೆ ಕೊಡುವುದಿಲ್ಲ. ಜನರ ನಿರೀಕ್ಷೆಗಳಿಗೆ ನನ್ನ ಆಡಳಿತವು ಸ್ಪಂದಿಸಿದೆಯೇ ಎಂಬುದನ್ನು ನೀವು (ಮಾಧ್ಯಮ) ನಿರ್ಧರಿಸಬೇಕು‘ ಎಂದು ನಿತೀಶ್‌ ಕುಮಾರ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT