<p><strong>ಭುವನೇಶ್ವರ:</strong> ಕೋಲ್ಕತ್ತದ ನೇತಾಜಿ ಸುಭಾಸ್ ಚಂದ್ರ ಬೋಸ್ (ಎನ್ಎಸ್ಸಿಬಿ) ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತಿರುವ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ‘ಅಪ್ರತಿಮ ಡಕೋಟಾ ವಿಮಾನ’ವನ್ನು ಭುವನೇಶ್ವರಕ್ಕೆ ಮರಳಿ ತರುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಒಡಿಶಾ ಸರ್ಕಾರ ಶುಕ್ರವಾರ ತಿಳಿಸಿದೆ.</p>.<p>ವಿಮಾನವನ್ನು ಮರಳಿ ತರಲು ರಾಜ್ಯದಾದ್ಯಂತದ ಜನರ ಬೇಡಿಕೆ ಹೆಚ್ಚಿರುವುದನ್ನು ಗಮನದಲ್ಲಿಟ್ಟುಕೊಂಡು, ಡಕೋಟಾ ಸಾಗಣೆಗೆ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಟೆಂಡರ್ ಕರೆದಿದೆ ಎಂದು ಒಡಿಶಾ ವಾಣಿಜ್ಯ ಮತ್ತು ಸಾರಿಗೆ ಸಚಿವ ಪದ್ಮನಾಭ ಬೆಹೆರಾ ತಿಳಿಸಿದರು.</p>.<p>ಡಕೋಟಾ ಶೀಘ್ರದಲ್ಲೇ ಭುವನೇಶ್ವರಕ್ಕೆ ಮರಳಲಿದೆ ಎಂದ ಸಚಿವರು, ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಬಿಜು ಪಟ್ನಾಯಕ್ ಅವರ ಪ್ರತಿಮೆಯ ಬಳಿ ವಿಮಾನ ಪ್ರದರ್ಶಿಸಲು ಅನುಮತಿ ಕೋರಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.</p>.<p>ವಿಮಾನವನ್ನು ಭುವನೇಶ್ವರಕ್ಕೆ ಸ್ಥಳಾಂತರಿಸುವ ಗುತ್ತಿಗೆಯನ್ನುಕೋಲ್ಕತ್ತ ಮೂಲದ ಕಂಪನಿಯೊಂದಕ್ಕೆ ನೀಡಲಾಗಿದೆ. ಕಳಚಿದ ವಿಮಾನವನ್ನು ರಸ್ತೆ ಮೂಲಕ ಭುವನೇಶ್ವರಕ್ಕೆ ತರಲು ಮತ್ತು ಅದನ್ನು ಇಲ್ಲಿನ ವಿಮಾನ ನಿಲ್ದಾಣದ ಆವರಣದಲ್ಲಿ ಮತ್ತೆ ಜೋಡಿಸಲು ಕಂಪನಿಗೆ ಅನುಮತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.</p>.<p>ಪೈಲಟ್ ಆಗಿದ್ದ ಬಿಜು ಪಟ್ನಾಯಕ್, 1947ರಲ್ಲಿ ಇಂಡೋನೇಷ್ಯಾದ ಅಂದಿನ ಪ್ರಧಾನಮಂತ್ರಿ ಸುಲ್ತಾನ್ ಷಹರ್ರಿರ್ ಅವರನ್ನು ಕಾಡಿನ ಅಡಗುತಾಣದಿಂದ ರಕ್ಷಿಸಲು ಸಹಪೈಲಟ್ ಆಗಿದ್ದ ಪತ್ನಿ ಗ್ಯಾನ್ ಪಟ್ನಾಯಕ್ ಅವರೊಂದಿಗೆ ಡಕೋಟಾ ವಿಮಾನವನ್ನು ಜಾವಾಕ್ಕೆ ಹಾರಿಸಿದ್ದರು.</p>.<p>ಬಿಜು ಪಟ್ನಾಯಕ್ ಅವರ ಶೌರ್ಯಕ್ಕೆ ಕೃತಜ್ಞತೆಯಿಂದ ಇಂಡೋನೇಷ್ಯಾ ತನ್ನ ದೇಶದ ಅತ್ಯುನ್ನತ ನಾಗರಿಕ ಗೌರವ ‘ಭೂಮಿಪುತ್ರ’ ಪುರಸ್ಕಾರ ನೀಡಿ ಗೌರವಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ:</strong> ಕೋಲ್ಕತ್ತದ ನೇತಾಜಿ ಸುಭಾಸ್ ಚಂದ್ರ ಬೋಸ್ (ಎನ್ಎಸ್ಸಿಬಿ) ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತಿರುವ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ‘ಅಪ್ರತಿಮ ಡಕೋಟಾ ವಿಮಾನ’ವನ್ನು ಭುವನೇಶ್ವರಕ್ಕೆ ಮರಳಿ ತರುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಒಡಿಶಾ ಸರ್ಕಾರ ಶುಕ್ರವಾರ ತಿಳಿಸಿದೆ.</p>.<p>ವಿಮಾನವನ್ನು ಮರಳಿ ತರಲು ರಾಜ್ಯದಾದ್ಯಂತದ ಜನರ ಬೇಡಿಕೆ ಹೆಚ್ಚಿರುವುದನ್ನು ಗಮನದಲ್ಲಿಟ್ಟುಕೊಂಡು, ಡಕೋಟಾ ಸಾಗಣೆಗೆ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಟೆಂಡರ್ ಕರೆದಿದೆ ಎಂದು ಒಡಿಶಾ ವಾಣಿಜ್ಯ ಮತ್ತು ಸಾರಿಗೆ ಸಚಿವ ಪದ್ಮನಾಭ ಬೆಹೆರಾ ತಿಳಿಸಿದರು.</p>.<p>ಡಕೋಟಾ ಶೀಘ್ರದಲ್ಲೇ ಭುವನೇಶ್ವರಕ್ಕೆ ಮರಳಲಿದೆ ಎಂದ ಸಚಿವರು, ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಬಿಜು ಪಟ್ನಾಯಕ್ ಅವರ ಪ್ರತಿಮೆಯ ಬಳಿ ವಿಮಾನ ಪ್ರದರ್ಶಿಸಲು ಅನುಮತಿ ಕೋರಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.</p>.<p>ವಿಮಾನವನ್ನು ಭುವನೇಶ್ವರಕ್ಕೆ ಸ್ಥಳಾಂತರಿಸುವ ಗುತ್ತಿಗೆಯನ್ನುಕೋಲ್ಕತ್ತ ಮೂಲದ ಕಂಪನಿಯೊಂದಕ್ಕೆ ನೀಡಲಾಗಿದೆ. ಕಳಚಿದ ವಿಮಾನವನ್ನು ರಸ್ತೆ ಮೂಲಕ ಭುವನೇಶ್ವರಕ್ಕೆ ತರಲು ಮತ್ತು ಅದನ್ನು ಇಲ್ಲಿನ ವಿಮಾನ ನಿಲ್ದಾಣದ ಆವರಣದಲ್ಲಿ ಮತ್ತೆ ಜೋಡಿಸಲು ಕಂಪನಿಗೆ ಅನುಮತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.</p>.<p>ಪೈಲಟ್ ಆಗಿದ್ದ ಬಿಜು ಪಟ್ನಾಯಕ್, 1947ರಲ್ಲಿ ಇಂಡೋನೇಷ್ಯಾದ ಅಂದಿನ ಪ್ರಧಾನಮಂತ್ರಿ ಸುಲ್ತಾನ್ ಷಹರ್ರಿರ್ ಅವರನ್ನು ಕಾಡಿನ ಅಡಗುತಾಣದಿಂದ ರಕ್ಷಿಸಲು ಸಹಪೈಲಟ್ ಆಗಿದ್ದ ಪತ್ನಿ ಗ್ಯಾನ್ ಪಟ್ನಾಯಕ್ ಅವರೊಂದಿಗೆ ಡಕೋಟಾ ವಿಮಾನವನ್ನು ಜಾವಾಕ್ಕೆ ಹಾರಿಸಿದ್ದರು.</p>.<p>ಬಿಜು ಪಟ್ನಾಯಕ್ ಅವರ ಶೌರ್ಯಕ್ಕೆ ಕೃತಜ್ಞತೆಯಿಂದ ಇಂಡೋನೇಷ್ಯಾ ತನ್ನ ದೇಶದ ಅತ್ಯುನ್ನತ ನಾಗರಿಕ ಗೌರವ ‘ಭೂಮಿಪುತ್ರ’ ಪುರಸ್ಕಾರ ನೀಡಿ ಗೌರವಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>