ಇತ್ತೀಚೆಗೆ ಪಕ್ಷ ತೊರೆದ ಮುಕುಲ್ ರಾಯ್ ಅವರ ಕುರಿತು ಟ್ವೀಟ್ ಮಾಡಿರುವ ಪಕ್ಷದ ಹಿರಿಯ ನಾಯಕ ತಥಾಗತ ರಾಯ್, ‘ಟೋರ್ಜನ್ ಹಾರ್ಸ್ (ಮುಕುಲ್ ರಾಯ್) ಅನ್ನು ಪಕ್ಷಕ್ಕೆ ಆಹ್ವಾನಿಸಲಾಯಿತು. ಅವರಿಗೆ ರಾಷ್ಟ್ರೀಯ ನಾಯಕರ ಸಂಪರ್ಕ ಸಿಕ್ಕಿತು. ರಾಜ್ಯ ಬಿಜೆಪಿಯ ಹಿರಿಯೊರೊಂದಿಗೆ ಪಳಗಿ, ತಂತ್ರಗಳನ್ನು ಅವರು ತಿಳಿದುಕೊಂಡರು. ಪಕ್ಷದ ಆಂತರಿಕ ವಿಚಾರಗಳನ್ನು ತಿಳಿದುಕೊಂಡರು. ಈಗ ಮತ್ತೆ ಹಿಂತಿರುಗಿ ಮಮತಾ ಅವರಿಗೆ ಮಾಹಿತಿ ಸೋರಿಕೆ ಮಾಡಿದರು,‘ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.