ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, ‘ಉತ್ತರ ಪ್ರದೇಶದ ಬಿಜೆಪಿ ನೇತೃತ್ವದ ಸರ್ಕಾರ ಕಳೆದ ನಾಲ್ಕೂವರೆ ವರ್ಷಗಳಿಂದ ಕಬ್ಬಿನ ಬೆಲೆ ಹೆಚ್ಚಿಸದೇ, ರೈತರನ್ನು ನಿರ್ಲಕ್ಷ್ಯಿಸುತ್ತಲೇ ಬಂದಿದೆ. ಸೆಪ್ಟೆಂಬರ್ 7ರಂದು ಲಖನೌದಲ್ಲಿ ನಡೆದ ಪ್ರಬುದ್ಧ ವರ್ಗಗಳ ಸಮಾವೇಶದಲ್ಲಿ ನಾನು ಈ ವಿಷಯದ ಬಗ್ಗೆ ಗಮನ ಸೆಳೆದಿದ್ದೆ. ಈಗ ಸರ್ಕಾರ ಕಬ್ಬು ಬೆಳೆಯುವ ರೈತರನ್ನು ನೆನಪಿಸಿಕೊಂಡಿದೆ. ಚುನಾವಣೆ ಸಮೀಪದಲ್ಲಿರುವಾಗ ರೈತರನ್ನು ನೆನಪಿಸಿಕೊಳ್ಳುವುದು, ಆ ಪಕ್ಷದಲ್ಲಿರುವ ಸ್ವಾರ್ಥ ಮನೋಭಾವವನ್ನು ತೋರಿಸುತ್ತದೆ'ಎಂದು ಹೇಳಿದ್ದಾರೆ.