ಶನಿವಾರ ಮಥುರಾದಲ್ಲಿ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಿದ ಜಯಂತ್, ‘ಆದಿತ್ಯನಾಥ ಅವರು ನನ್ನನ್ನು ಗೂಂಡಾ ಮತ್ತು ಗಲಭೆಕೋರ ಎಂದು ಕರೆಯುವ ಮೂಲಕ ನನ್ನನ್ನು ಬಲಿಪಶು ಮಾಡುತ್ತಿದ್ದಾರೆ. ಬಾಬಾ (ಆದಿತ್ಯನಾಥ) ಅವರು ನನ್ನನ್ನು ಗೂಂಡಾ ಎಂದು ಪರಿಗಣಿಸಿದ್ದಾರೆ. ಆದರೆ, ನನ್ನ ತಾತ ಚೌಧರಿ ಚರಣ್ ಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಗೂಂಡಾ ಕಾಯ್ದೆ ಜಾರಿಗೆ ಬಂದಿತ್ತು ಎಂಬುದನ್ನು ನಾನು ಆದಿತ್ಯನಾಥ ಅವರಿಗೆ ನೆನಪಿಸ ಬಯಸುತ್ತೇನೆ’ ಎಂದು ಜಯಂತ್ ತಿರುಗೇಟು ನೀಡಿದ್ದಾರೆ.