ಸಾರಿಗೆ, ನೀರಾವರಿ ಸಚಿವ ಸ್ಥಾನಕ್ಕೆ ಅಧಿಕಾರಿ ಅವರು ರಾಜೀನಾಮೆ ನೀಡಿದ್ದರೂ, ಟಿಎಂಸಿಗಾಗಲಿ ಅಥವಾ ಶಾಸಕ ಸ್ಥಾನಕ್ಕಾಗಲಿ ಅವರು ರಾಜೀನಾಮೆ ನೀಡಿಲ್ಲ. ‘ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಟಿಎಂಸಿಯಲ್ಲಿ ಇರುವುದು ಅವರಿಗೆ ಕಷ್ಟವಾಗಬಹುದು. ಹೀಗಾಗಿ ಹೊಸ ಪಕ್ಷ ಸ್ಥಾಪಿಸುವುದು ಅಥವಾ ಕಾಂಗ್ರೆಸ್ ಅಥವಾ ಬಿಜೆಪಿ ಸೇರ್ಪಡೆಯಾಗುವುದು ಅವರ ಮುಂದಿರುವ ಆಯ್ಕೆಗಳು’ ಎಂದರು.