‘ಸರ್ಕಾರದಿಂದ ಧನಸಹಾಯ ಪಡೆದ ಎಲ್ಲಾ ಮದರಸಾಗಳನ್ನು ಸ್ಥಗಿತಗೊಳಿಸಲು ಮುಂದಿನ ತಿಂಗಳು ಅಧಿಸೂಚನೆ ಹೊರಡಿಸಲಾಗುವುದು. ಧಾರ್ಮಿಕ ಶಿಕ್ಷಣವನ್ನು ಸರ್ಕಾರದ ಹಣದಲ್ಲಿ ನಡೆಸುವುದನ್ನು ನಾವು ವಿರೋಧಿಸುತ್ತೇವೆ. ಆದರೆ ಖಾಸಗಿ ಧನಸಹಾಯದೊಂದಿಗೆ ನಡೆಯುವುದನ್ನು ನಾವು ತಡೆಯಲು ಸಾಧ್ಯವಿಲ್ಲ’ ಎಂದು ಅಸ್ಸಾಂ ಶಿಕ್ಷಣ ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದರು.