ಕೋಲ್ಕತ್ತ: ಕಾಳಿ ಮಾತೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಬಿಜೆಪಿ ಟೀಕೆಗೆ ಗುರಿಯಾಗಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ, ‘ಹಿಂದೂ ದೇವತೆಗಳು ಕೇಸರಿ ಪಕ್ಷದ ಸುಪರ್ದಿಯಲ್ಲಿ ಇಲ್ಲ, ಬಂಗಾಳದ ಜನರಿಗೆ ಅವರು ಕಾಳಿ ಮಾತೆ ಆರಾಧನೆಯ ಪಾಠ ಹೇಳುವ ಅಗತ್ಯವಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.