ಕನ್ನಡಿಗರ ಜನ ಸಂಖ್ಯೆ ಹೆಚ್ಚಿರುವ ವಾಸ್ಕೊ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣಾ ಸಾಲ್ಕರ್ ಅವರು ಭವನ ನಿರ್ಮಾಣಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ಇಲ್ಲಿ ವಾಸಿಸುತ್ತಿರುವ ಕರ್ನಾಟಕಟ ಮೂಲದವರನ್ನು ಕನ್ನಡಿಗರು ಎಂದು ಸಂಬೋಧಿಸುವುದನ್ನು ನಿಲ್ಲಿಸಬೇಕು. ಅವರು ಗೋವನ್ನರು. ಯಾಕೆಂದರೆ, ಪೋರ್ಚುಗೀಸರ ಕಾಲದಿಂದ ಅವರು ಗೋವಾದಲ್ಲಿಯೇ ವಾಸವಿದ್ದಾರೆ’ ಎಂದು ಕೆಲವು ದಿನಗಳ ಹಿಂದೆ ಕೃಷ್ಣಾ ಅವರು ಹೇಳಿದ್ದರು.