ಕೋಲ್ಕತ್ತ: ಗೋವುಗಳ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಗುರುವಾರ ಇಲ್ಲಿನ ಐದು ಸ್ಥಳಗಳಲ್ಲಿ ಶೋಧ ನಡೆಸಿದೆ.
ಈ ಕಾರ್ಯಾಚರಣೆ ಗುರುವಾರ ಬೆಳಿಗ್ಗೆ ಆರಂಭವಾಗಿದೆ ಎಂದು ಸಿಬಿಐ ವಕ್ತಾರರೊಬ್ಬರು ತಿಳಿಸಿದ್ದಾರೆ. ನಗರದ ಇಬ್ಬರು ಲೆಕ್ಕ ಪರಿಶೋಧಕರ ಕಚೇರಿ ಆವರಣ ಹಾಗೂ ಮನೆಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಭಾರತ– ಬಾಂಗ್ಲಾದೇಶ ಗಡಿಯಲ್ಲಿ ಗೋವುಗಳ ಕಳ್ಳಸಾಗಣೆಗೆ ಸಂಬಂಧಿಸಿ ಸೆಪ್ಟೆಂಬರ್ 23ರಂದು ಬಿಎಸ್ಎಫ್ನ ಮಾಜಿ ಕಮಾಂಡೆಂಟ್ ಹಾಗೂ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಮೊದಲು ಸಿಬಿಐ, ಕೋಲ್ಕತ್ತದ 13 ಸ್ಥಳಗಳು, ಪಶ್ಚಿಮ ಬಂಗಾಳದ ಮುರ್ಷಿದಾಬಾದ್, ಉತ್ತರಪ್ರದೇಶದ ಗಾಜಿಯಾಬಾದ್, ಪಂಜಾಬ್ನ ಅಮೃತಸರ ಹಾಗೂ ಛತ್ತಿಸಗಡದ ರಾಯಪುರದಲ್ಲಿ ದಾಳಿ ನಡೆಸಿತ್ತು.