<p><strong>ಕಲ್ನಾ(ಪಶ್ಚಿಮ ಬಂಗಾಳ):</strong> ‘ಅರ್ಹ ರೈತರನ್ನು ಆಯ್ಕೆ ಮಾಡಿ ಪಟ್ಟಿ ಕಳುಹಿಸಿದ್ದರೂ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳದ ರೈತರಿಗೆ ಪಿಎಂ–ಕಿಸಾನ್ ಯೋಜನೆಯಡಿ ಹಣ ಬಿಡುಗಡೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದರು.</p>.<p>ಇಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ‘ರೈತರಿಗೆ ಹಣ ನೀಡುವುದನ್ನು ನಮ್ಮ ಸರ್ಕಾರ ನಿರಾಕರಿಸುತ್ತಿದೆ‘ ಎಂದು ಬಿಜೆಪಿ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಟಿಎಂಸಿ ಸರ್ಕಾರ ರಾಜ್ಯದ ಪ್ರತಿ ರೈತರಿಗೆ ₹5 ಸಾವಿರ ಹಣ ಕೊಡುವ ಜತೆಗೆ, ಉಚಿತ ಬೆಳೆ ವಿಮೆಯ ಸೌಲಭ್ಯವನ್ನೂ ನೀಡಿದೆ‘ ಎಂದು ಪ್ರತಿಪಾದಿಸಿದರು.</p>.<p>ಪಿಎಂ–ಕಿಸಾನ್ ಸಮ್ಮಾನ್ ನಿಧಿ ಅಡಿ ಕೇಂದ್ರ ಕಳುಹಿಸಿದ್ದ 6 ಲಕ್ಷ ರೈತರ ಹೆಸರುಗಳನ್ನು ರಾಜ್ಯ ಸರ್ಕಾರ ಪರಿಶೀಲಿಸಿ, ಎರಡೂವರೆ ಲಕ್ಷ ರೈತರ ಹೆಸರನ್ನು ಆಯ್ಕೆ ಮಾಡಿ, ಆ ಪಟ್ಟಿಯನ್ನು ಪುನಃ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದರೆ, ಇಲ್ಲಿವರೆಗೂ ಆ ರೈತರಿಗೆ ಹಣ ನೀಡಿಲ್ಲ‘ ಎಂದು ಮುಖ್ಯಮಂತ್ರಿ ಅವರು ಸೋಮವಾರ ವಿಧಾನಸಭೆಗೆ ತಿಳಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲ್ನಾ(ಪಶ್ಚಿಮ ಬಂಗಾಳ):</strong> ‘ಅರ್ಹ ರೈತರನ್ನು ಆಯ್ಕೆ ಮಾಡಿ ಪಟ್ಟಿ ಕಳುಹಿಸಿದ್ದರೂ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳದ ರೈತರಿಗೆ ಪಿಎಂ–ಕಿಸಾನ್ ಯೋಜನೆಯಡಿ ಹಣ ಬಿಡುಗಡೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದರು.</p>.<p>ಇಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ‘ರೈತರಿಗೆ ಹಣ ನೀಡುವುದನ್ನು ನಮ್ಮ ಸರ್ಕಾರ ನಿರಾಕರಿಸುತ್ತಿದೆ‘ ಎಂದು ಬಿಜೆಪಿ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಟಿಎಂಸಿ ಸರ್ಕಾರ ರಾಜ್ಯದ ಪ್ರತಿ ರೈತರಿಗೆ ₹5 ಸಾವಿರ ಹಣ ಕೊಡುವ ಜತೆಗೆ, ಉಚಿತ ಬೆಳೆ ವಿಮೆಯ ಸೌಲಭ್ಯವನ್ನೂ ನೀಡಿದೆ‘ ಎಂದು ಪ್ರತಿಪಾದಿಸಿದರು.</p>.<p>ಪಿಎಂ–ಕಿಸಾನ್ ಸಮ್ಮಾನ್ ನಿಧಿ ಅಡಿ ಕೇಂದ್ರ ಕಳುಹಿಸಿದ್ದ 6 ಲಕ್ಷ ರೈತರ ಹೆಸರುಗಳನ್ನು ರಾಜ್ಯ ಸರ್ಕಾರ ಪರಿಶೀಲಿಸಿ, ಎರಡೂವರೆ ಲಕ್ಷ ರೈತರ ಹೆಸರನ್ನು ಆಯ್ಕೆ ಮಾಡಿ, ಆ ಪಟ್ಟಿಯನ್ನು ಪುನಃ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದರೆ, ಇಲ್ಲಿವರೆಗೂ ಆ ರೈತರಿಗೆ ಹಣ ನೀಡಿಲ್ಲ‘ ಎಂದು ಮುಖ್ಯಮಂತ್ರಿ ಅವರು ಸೋಮವಾರ ವಿಧಾನಸಭೆಗೆ ತಿಳಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>