ಅವರ ವಿರುದ್ಧ ಗಂಭೀರ ಸ್ವರೂಪದ ಆರೋಪಗಳಿವೆ. ಅವುಗಳು ಸಾಬೀತಾದರೆ, ಅವರಿಗೆ ಮರಣ ದಂಡನೆ ಶಿಕ್ಷೆಯೂ ಆಗಬಹುದು ಎಂದು ಎನ್ಐಎ ಹೇಳಿದೆ. ಈ ವೇಳೆ ಎಲ್ಲಾ ವಾದ-ಪ್ರತಿವಾದಗಳನ್ನು ಆಲಿಸಿದ ಬಾಂಬೆ ಹೈಕೋರ್ಟ್, ಈ ಕುರಿತಾದ ತೀರ್ಪು ನೀಡುವವರೆಗೆ ವರವರ ರಾವ್ ಅವರು ತಲೋಜಾ ಜೈಲಿನ ಅಧಿಕಾರಿಗಳ ಬಳಿ ಶರಣಾಗತರಾಗುವ ಅಗತ್ಯವಿಲ್ಲ ಎಂದು ಹೇಳಿದೆ.