<p><strong>ರಾಯ್ಪುರ: </strong>ಗೋವರ್ಧನ ಪೂಜೆಯ ಆಚರಣೆಯ ಪ್ರಯುಕ್ತ ಛತ್ತೀಸ್ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಶುಕ್ರವಾರ ಚಾಟಿ ಏಟಿಗೆ ಕೈಯೊಡ್ಡಿದರು.</p>.<p>ದುರ್ಗಾ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಸಾಂಪ್ರದಾಯಿಕ ಆಚರಣೆಯಲ್ಲಿ ರಾಜ್ಯದ ಒಳಿತಿಗೆ ಪ್ರಾರ್ಥಿಸಿ ಮುಖ್ಯಮಂತ್ರಿ ಬಘೇಲ್ ಅವರು ಚಾಟಿ ಏಟು ತಿಂದರು. ಹುಲ್ಲು ಮತ್ತು ಕುಷ್ (ಗಾಂಜಾ ಸೊಪ್ಪಿನಂತೆ ಬಳಕೆ ಮಾಡುವ ಗಿಡ) ಸಿದ್ಧಪಡಿಸಲಾಗಿದ್ದ ಚಾಟಿಯಿಂದ ಬಲಗೈನ ಮಣಿಕಟ್ಟಿಗೆ ಏಟು ಸ್ವೀಕರಿಸಿದರು. ಬಳಿಕ 8 ಸುತ್ತಿನ ಚಾಟಿ ಏಟು ನೀಡಿದ ವ್ಯಕ್ತಿ ಸಿಎಂ ಅವರನ್ನು ಅಪ್ಪಿಕೊಂಡರು.</p>.<p>ಈ ಆಚರಣೆಯಿಂದ ಸಮಸ್ಯೆಗಳಿಂದ ಹೊರಬರುವುದು ಹಾಗೂ ಶುಭವನ್ನು ಪಡೆಯುವುದು ಸಾಧ್ಯ ಎಂದು ನಂಬಲಾಗಿದೆ. ದೀಪಾವಳಿಯ ನಂತರದ ದಿನದಲ್ಲಿ ಗೋವರ್ಧನ ಪೂಜೆ ನೆರವೇರಿಸಲಾಗುತ್ತದೆ.</p>.<p>'ಪ್ರತಿ ವರ್ಷದಂತೆ ಈ ಬಾರಿಯೂ ಮುಖ್ಯಮಂತ್ರಿ ಬಘೇಲ್ ಅವರು ಗೋವರ್ಧನ ಪೂಜೆಯಲ್ಲಿ ಭಾಗಿಯಾಗಿ ಚಾಟಿ ಏಟಿನ ನೋವು ಸಹಿಸಿಕೊಂಡರು. ಜನರ ಒಳತಿಗಾಗಿ ರಾಜ್ಯದಲ್ಲಿ ಹಲವು ವರ್ಷಗಳಿಂದ ಆಚರಿಸಲಾಗುತ್ತಿರುವ ಆಚರಣೆಯನ್ನು ಈ ಮೂಲಕ ಎತ್ತಿ ಹಿಡಿದಿದ್ದಾರೆ' ಎಂದು ಸರ್ಕಾರದ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದರು.</p>.<p>ಗೋವರ್ಧನ ಪೂಜೆ ಸಂದರ್ಭದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಲಾಯಿತು. ಬಘೇಲ್ ಅವರು ಚಾಟಿ ಏಟು ಅನುಭವಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯ್ಪುರ: </strong>ಗೋವರ್ಧನ ಪೂಜೆಯ ಆಚರಣೆಯ ಪ್ರಯುಕ್ತ ಛತ್ತೀಸ್ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಶುಕ್ರವಾರ ಚಾಟಿ ಏಟಿಗೆ ಕೈಯೊಡ್ಡಿದರು.</p>.<p>ದುರ್ಗಾ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಸಾಂಪ್ರದಾಯಿಕ ಆಚರಣೆಯಲ್ಲಿ ರಾಜ್ಯದ ಒಳಿತಿಗೆ ಪ್ರಾರ್ಥಿಸಿ ಮುಖ್ಯಮಂತ್ರಿ ಬಘೇಲ್ ಅವರು ಚಾಟಿ ಏಟು ತಿಂದರು. ಹುಲ್ಲು ಮತ್ತು ಕುಷ್ (ಗಾಂಜಾ ಸೊಪ್ಪಿನಂತೆ ಬಳಕೆ ಮಾಡುವ ಗಿಡ) ಸಿದ್ಧಪಡಿಸಲಾಗಿದ್ದ ಚಾಟಿಯಿಂದ ಬಲಗೈನ ಮಣಿಕಟ್ಟಿಗೆ ಏಟು ಸ್ವೀಕರಿಸಿದರು. ಬಳಿಕ 8 ಸುತ್ತಿನ ಚಾಟಿ ಏಟು ನೀಡಿದ ವ್ಯಕ್ತಿ ಸಿಎಂ ಅವರನ್ನು ಅಪ್ಪಿಕೊಂಡರು.</p>.<p>ಈ ಆಚರಣೆಯಿಂದ ಸಮಸ್ಯೆಗಳಿಂದ ಹೊರಬರುವುದು ಹಾಗೂ ಶುಭವನ್ನು ಪಡೆಯುವುದು ಸಾಧ್ಯ ಎಂದು ನಂಬಲಾಗಿದೆ. ದೀಪಾವಳಿಯ ನಂತರದ ದಿನದಲ್ಲಿ ಗೋವರ್ಧನ ಪೂಜೆ ನೆರವೇರಿಸಲಾಗುತ್ತದೆ.</p>.<p>'ಪ್ರತಿ ವರ್ಷದಂತೆ ಈ ಬಾರಿಯೂ ಮುಖ್ಯಮಂತ್ರಿ ಬಘೇಲ್ ಅವರು ಗೋವರ್ಧನ ಪೂಜೆಯಲ್ಲಿ ಭಾಗಿಯಾಗಿ ಚಾಟಿ ಏಟಿನ ನೋವು ಸಹಿಸಿಕೊಂಡರು. ಜನರ ಒಳತಿಗಾಗಿ ರಾಜ್ಯದಲ್ಲಿ ಹಲವು ವರ್ಷಗಳಿಂದ ಆಚರಿಸಲಾಗುತ್ತಿರುವ ಆಚರಣೆಯನ್ನು ಈ ಮೂಲಕ ಎತ್ತಿ ಹಿಡಿದಿದ್ದಾರೆ' ಎಂದು ಸರ್ಕಾರದ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದರು.</p>.<p>ಗೋವರ್ಧನ ಪೂಜೆ ಸಂದರ್ಭದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಲಾಯಿತು. ಬಘೇಲ್ ಅವರು ಚಾಟಿ ಏಟು ಅನುಭವಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>