ದುರ್ಗಾ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಸಾಂಪ್ರದಾಯಿಕ ಆಚರಣೆಯಲ್ಲಿ ರಾಜ್ಯದ ಒಳಿತಿಗೆ ಪ್ರಾರ್ಥಿಸಿ ಮುಖ್ಯಮಂತ್ರಿ ಬಘೇಲ್ ಅವರು ಚಾಟಿ ಏಟು ತಿಂದರು. ಹುಲ್ಲು ಮತ್ತು ಕುಷ್ (ಗಾಂಜಾ ಸೊಪ್ಪಿನಂತೆ ಬಳಕೆ ಮಾಡುವ ಗಿಡ) ಸಿದ್ಧಪಡಿಸಲಾಗಿದ್ದ ಚಾಟಿಯಿಂದ ಬಲಗೈನ ಮಣಿಕಟ್ಟಿಗೆ ಏಟು ಸ್ವೀಕರಿಸಿದರು. ಬಳಿಕ 8 ಸುತ್ತಿನ ಚಾಟಿ ಏಟು ನೀಡಿದ ವ್ಯಕ್ತಿ ಸಿಎಂ ಅವರನ್ನು ಅಪ್ಪಿಕೊಂಡರು.