ಏಪ್ರಿಲ್ 6ರಂದು ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಕನ್ಯಾಕುಮಾರಿಯಲ್ಲಿ ನಡೆದ ರೋಡ್ ಶೋನಲ್ಲಿ ಮಾತನಾಡಿರುವ ರಾಹುಲ್,ʼತಮಿಳು ಸಂಸ್ಕೃತಿಯನ್ನು ಅವಮಾನಿಸಲು ಅವರು (ಪಳನಿಸ್ವಾಮಿ) ಆರ್ಎಸ್ಎಸ್ಗೆ ಅವಕಾಶ ನೀಡಬಾರದು. ʼಒಂದು ದೇಶ, ಒಂದು ಸಂಸ್ಕೃತಿ, ಒಂದೇ ಇತಿಹಾಸʼ ಎಂದುಮೋದಿ ಹೇಳುತ್ತಾರೆ. ತಮಿಳು, ಭಾರತೀಯ ಭಾಷೆಯಲ್ಲವೇ? ತಮಿಳರ ಇತಿಹಾಸ ಭಾರತಕ್ಕೆ ಸೇರಿಲ್ಲವೇ? ಅಥವಾ ತಮಿಳು ಸಂಸ್ಕೃತಿ ಭಾರತದ್ದಲ್ಲವೇ? ಒಬ್ಬ ಭಾರತೀಯನಾಗಿ ತಮಿಳು ಸಂಸ್ಕೃತಿಯನ್ನು ರಕ್ಷಿಸುವುದು ನನ್ನ ಕರ್ತವ್ಯʼ ಎಂದುಹೇಳಿದ್ದಾರೆ.