ಇದೇ ವೇಳೆ ಪ್ರವಾಹದಿಂದ ಅಪಾಯಕ್ಕೆ ಸಿಲುಕಿದ್ದ1200 ವರ್ಷಗಳಷ್ಟು ಹಳೆಯದಾದ ವಿಶ್ವ ಪಾರಂಪರಿಕ ತಾಣ 71 ಮೀಟರ್ ಎತ್ತರದ ಬೃಹತ್ ಬುದ್ಧನ ಮೂರ್ತಿಯನ್ನು ರಕ್ಷಿಸಲು ಪೊಲೀಸರು, ಸರ್ಕಾರ ಮತ್ತು ಸ್ವಯಂ ಸೇವಕರು ಮುಂದಾಗಿದ್ದಾರೆ. ಕೆಸರು ಮಿಶ್ರಿತ ನೀರಿನಿಂದ ಬುದ್ಧನ ಮೂರ್ತಿಯನ್ನು ರಕ್ಷಿಸಲು ಸ್ವಯಂ ಸೇವಕರು ಮರಳು ಚೀಲಗಳ ರಾಶಿ ಹಾಕಿದ್ದಾರೆ.