ಹೈದರಾಬಾದ್:ಭಾರತ್ ರಾಷ್ಟ್ರ ಸಮಿತಿ ಪಕ್ಷದ ಮುಖ್ಯಸ್ಥ, ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (ಕೆಸಿಆರ್) ಅವರಕಟ್ಟಾ ಅಭಿಮಾನಿಯೊಬ್ಬರು ದೇವಾಲಯವನ್ನು ನಿರ್ಮಿಸಿದ್ದಾರೆ.
ಆ ದೇವಸ್ಥಾನದಲ್ಲಿ ಕೆಸಿಆರ್ ವಿಗ್ರಹವನ್ನೂ ಸ್ಥಾಪನೆ ಮಾಡಿದ್ದು,ನಿತ್ಯ ಪೂಜೆ ಮಾಡಿಸುತ್ತಿದ್ದಾರೆ.
ತೆಲಂಗಾಣದ ನಲ್ಗೊಂಡ ಜಿಲ್ಲೆಯ ನಿಡಮನೂರ್ ಗ್ರಾಮದ ಗೋಗುಲ ಶ್ರೀನಿವಾಸ್ ಎಂಬುವರು ದೇವಾಲಯ ನಿರ್ಮಾಣ ಮಾಡಿದ್ದಾರೆ. ಇವರು ಪೊಲೀಸ್ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾರೆ.
ಈ ದೇವಾಲಯ ನಿರ್ಮಾಣಕ್ಕೆ ₹ 20 ಲಕ್ಷ ಖರ್ಚು ಮಾಡಿದ್ದಾರೆ.
ಪ್ರತ್ಯೇಕ ತೆಲಂಗಾಣಕ್ಕಾಗಿ ಕೆಸಿಆರ್ ನಡೆಸಿದ ಚಳವಳಿಗಳಲ್ಲಿ ಶ್ರೀನಿವಾಸ್ ಭಾಗವಹಿಸಿದ್ದರು. ಕೆಸಿಆರ್ ಪ್ರಧಾನಿಯಾಗಬೇಕು ಎಂದು ಅವರು ಹೇಳಿದ್ದಾರೆ.