ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ಜನರಿಗೆ ಹೊರೆಯಾದ ಸಿಲಿಂಡರ್ ಮರುಭರ್ತಿ: ಕಾಂಗ್ರೆಸ್‌ ವಾಗ್ದಾಳಿ

Last Updated 30 ಜೂನ್ 2022, 15:56 IST
ಅಕ್ಷರ ಗಾತ್ರ

ನವದೆಹಲಿ: ಅಡುಗೆ ಅನಿಲ ಏರಿಕೆಯಿಂದ ಸಾಮಾನ್ಯ ಜನರು ಗೃಹ ಬಳಕೆಯ ಒಂದು ಮರುಭರ್ತಿಸಿಲಿಂಡರ್‌ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಮಾಧ್ಯಮ ವರದಿ ಉಲ್ಲೇಖಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ , 2021–22ರಲ್ಲಿ 3.9 ಕೋಟಿ ಗ್ರಾಹಕರಿಗೆ ಮರುಭರ್ತಿ ಸಿಲಿಂಡರ್‌ ಪಡೆಯಲು ಸಾಧ್ಯವಾಗಿಲ್ಲ. 2016ರಲ್ಲಿ ಚಾಲನೆ ನೀಡಿದ ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಜಾಹೀರಾತಿಗಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಕಳೆದ ವರ್ಷ ಆ.10 ರಂದು ಬಿಡುಗಡೆಗೊಂಡ ಉಜ್ವಲ್ 2 ಯೋಜನೆಗೆ ತೆರಿಗೆದಾರರ ಹಣವನ್ನು ಜಾಹೀರಾತಿಗಾಗಿ ಮತ್ತೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

’ಅಡುಗೆ ಅನಿಲ ಏರಿಕೆಯಿಂದ ಪ್ರಸ್ತುತ ಸಿಲಿಂಡರ್ ಭರ್ತಿಗೆ ಒಂದು ಸಾವಿರ ವೆಚ್ಚವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಮಂತರು ಮತ್ತು ಬಡವರಿಗೊಂದು ಭಾರತ ಸೃಷ್ಟಿಸಿದ್ದಾರೆ‘ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT