<p><strong>ನವದೆಹಲಿ</strong>: ದೇಶದಲ್ಲಿ ಮುಕ್ತ ಮತ್ತು ಸ್ವತಂತ್ರ ಪತ್ರಿಕೋದ್ಯಮವನ್ನು ಹತ್ತಿಕ್ಕಲು ಸರ್ಕಾರಿ ಸಂಸ್ಥೆಗಳನ್ನು ‘ದಬ್ಬಾಳಿಕೆಯ ಅಸ್ತ್ರ’ವಾಗಿ ಬಳಸಲಾಗುತ್ತಿದೆ ಎಂದು ಭಾರತೀಯ ಸಂಪಾದಕರ ಮಂಡಳಿ ಕಳವಳ ವ್ಯಕ್ತಪಡಿಸಿದೆ.</p>.<p class="bodytext">ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ಒಂದಾದ ‘ದೈನಿಕ್ ಭಾಸ್ಕರ್’ನ ಕಚೇರಿಗಳ ಮೇಲೆವಿವಿಧೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ಬೆಳವಣಿಗೆಯ ಹಿಂದೆಯೇ ಮಂಡಳಿ ಈ ಹೇಳಿಕೆ ನೀಡಿದೆ.</p>.<p class="bodytext">ದೈನಿಕ್ ಭಾಸ್ಕರ್ ಮತ್ತು ಲಖನೌ ಮೂಲದ ಸ್ವತಂತ್ರ ಸುದ್ದಿ ವಾಹಿನಿ ಭಾರತ್ ಸಮಾಚಾರ್ ಕಚೇರಿಗಳ ಮೇಲೆ ನಡೆದ ಐ.ಟಿ ದಾಳಿ ಬಗ್ಗೆ ಭಾರತೀಯ ಸಂಪಾದಕರ ಮಂಡಳಿ (ಇಜಿಐ) ಆತಂಕ ವ್ಯಕ್ತಪಡಿಸಿದೆ.</p>.<p class="bodytext">ಈ ಕುರಿತ ಹೇಳಿಕೆಯಲ್ಲಿ ಇಜಿಐ, ‘ಕೋವಿಡ್–19 ಪಿಡುಗಿನ ಸಾವುಗಳ ಕುರಿತ ವರದಿಗಳ ನಂತರ ಈ ದಾಳಿ ನಡೆದಿದೆ. ದೈನಿಕ್ ಭಾಸ್ಕರ್ ಪತ್ರಿಕೆಯ ಸಂಪಾದಕ ಓಂ ಗೌರ್ ಅವರು ಇತ್ತೀಚಿಗೆ ವೆಬಿನಾರ್ನಲ್ಲಿ, ಸರ್ಕಾರಿ ಇಲಾಖೆಗಳಿಂದ ಬರಬೇಕಾದ ಜಾಹೀರಾತು ಪ್ರಮಾಣವು ಕಡಿಮೆಯಾಗಿರುವುದಾಗಿ ತಿಳಿಸಿದ್ದರು‘ ಎಂದು ಹೇಳಲಾಗಿದೆ.</p>.<p class="bodytext"><strong>ಇದನ್ನೂ ಓದಿ: </strong><a href="https://www.prajavani.net/india-news/media-group-dainik-bhaskar-tax-department-raids-bhopal-and-multiple-premises-850486.html" target="_blank">ದೈನಿಕ್ ಭಾಸ್ಕರ್ ಮಾಧ್ಯಮ ಸಮೂಹದ ಮೇಲೆ ಐಟಿ ದಾಳಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ದೇಶದಲ್ಲಿ ಮುಕ್ತ ಮತ್ತು ಸ್ವತಂತ್ರ ಪತ್ರಿಕೋದ್ಯಮವನ್ನು ಹತ್ತಿಕ್ಕಲು ಸರ್ಕಾರಿ ಸಂಸ್ಥೆಗಳನ್ನು ‘ದಬ್ಬಾಳಿಕೆಯ ಅಸ್ತ್ರ’ವಾಗಿ ಬಳಸಲಾಗುತ್ತಿದೆ ಎಂದು ಭಾರತೀಯ ಸಂಪಾದಕರ ಮಂಡಳಿ ಕಳವಳ ವ್ಯಕ್ತಪಡಿಸಿದೆ.</p>.<p class="bodytext">ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ಒಂದಾದ ‘ದೈನಿಕ್ ಭಾಸ್ಕರ್’ನ ಕಚೇರಿಗಳ ಮೇಲೆವಿವಿಧೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ಬೆಳವಣಿಗೆಯ ಹಿಂದೆಯೇ ಮಂಡಳಿ ಈ ಹೇಳಿಕೆ ನೀಡಿದೆ.</p>.<p class="bodytext">ದೈನಿಕ್ ಭಾಸ್ಕರ್ ಮತ್ತು ಲಖನೌ ಮೂಲದ ಸ್ವತಂತ್ರ ಸುದ್ದಿ ವಾಹಿನಿ ಭಾರತ್ ಸಮಾಚಾರ್ ಕಚೇರಿಗಳ ಮೇಲೆ ನಡೆದ ಐ.ಟಿ ದಾಳಿ ಬಗ್ಗೆ ಭಾರತೀಯ ಸಂಪಾದಕರ ಮಂಡಳಿ (ಇಜಿಐ) ಆತಂಕ ವ್ಯಕ್ತಪಡಿಸಿದೆ.</p>.<p class="bodytext">ಈ ಕುರಿತ ಹೇಳಿಕೆಯಲ್ಲಿ ಇಜಿಐ, ‘ಕೋವಿಡ್–19 ಪಿಡುಗಿನ ಸಾವುಗಳ ಕುರಿತ ವರದಿಗಳ ನಂತರ ಈ ದಾಳಿ ನಡೆದಿದೆ. ದೈನಿಕ್ ಭಾಸ್ಕರ್ ಪತ್ರಿಕೆಯ ಸಂಪಾದಕ ಓಂ ಗೌರ್ ಅವರು ಇತ್ತೀಚಿಗೆ ವೆಬಿನಾರ್ನಲ್ಲಿ, ಸರ್ಕಾರಿ ಇಲಾಖೆಗಳಿಂದ ಬರಬೇಕಾದ ಜಾಹೀರಾತು ಪ್ರಮಾಣವು ಕಡಿಮೆಯಾಗಿರುವುದಾಗಿ ತಿಳಿಸಿದ್ದರು‘ ಎಂದು ಹೇಳಲಾಗಿದೆ.</p>.<p class="bodytext"><strong>ಇದನ್ನೂ ಓದಿ: </strong><a href="https://www.prajavani.net/india-news/media-group-dainik-bhaskar-tax-department-raids-bhopal-and-multiple-premises-850486.html" target="_blank">ದೈನಿಕ್ ಭಾಸ್ಕರ್ ಮಾಧ್ಯಮ ಸಮೂಹದ ಮೇಲೆ ಐಟಿ ದಾಳಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>