<p class="bodytext"><strong>ನವದೆಹಲಿ</strong>: ಪಿ.ಎಂ ಕೇರ್ಸ್ ನಿಧಿಗೆ ಬಂದಿರುವ ದೇಣಿಗೆಯ ವಿಷಯ ಸೋಮವಾರ ಲೋಕಸಭೆಯಲ್ಲಿ ಕಾಂಗ್ರೆಸ್ ಮತ್ತು ಸರ್ಕಾರದ ನಡುವೆ ಬಿಸಿ ಚರ್ಚೆಗೆ ಆಸ್ಪದವಾಯಿತು.</p>.<p class="bodytext">ಎಲ್ಐಸಿ ಜನರಿಗೆ ಅನುಕೂಲ ಕಲ್ಪಿಸುವ ಬದಲು ಈ ನಿಧಿಗೆ ನೆರವು ನೀಡಿತು ಎಂದು ವಿರೋಧಪಕ್ಷ ಆರೋಪಿಸಿತು. ಇದಕ್ಕೆ ಎದಿರೇಟು ನೀಡಿದ ಸಚಿವ ಅನುರಾಗ್ ಠಾಕೂರ್ ಅವರು ರಾಜೀವ್ಗಾಂಧಿ ಫೌಂಡೇಷನ್ ಚೀನಾದಿಂದಲೂ ದೇಣಿಗೆ ಸ್ವೀಕರಿಸಿದೆ ಎಂದು ಟೀಕಿಸಿದರು.</p>.<p class="bodytext">ಪ್ರಶ್ನೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಲೋಕಸಭೆಯ ಕಾಂಗ್ರೆಸ್ನ ಹಂಗಾಮಿ ನಾಯಕ ರಣವೀತ್ ಸಿಂಗ್ ಅವರು, ಲಾಕ್ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರು ಮತ್ತು ಕಡುಬಡವರು ತೀವ್ರ ಕಷ್ಟವನ್ನು ಅನುಭವಿಸಬೇಕಾಯಿತು ಎಂದು ದೂರಿದರು.</p>.<p>‘ಈ ಜನರಿಗೆ ಸಿಗಬೇಕಾದ ನೆರವು ಸಿಗಲಿಲ್ಲ. ಎಲ್ಐಸಿಯೂ ನಿಧಿಯನ್ನು ಕೇವಲ ಪಿಎಂ ಕೇರ್ಸ್ ನಿಧಿಗೆ ನೀಡುತ್ತದೆ. ಏಕೆ ಹೀಗೆ? ಎಂದು ಪ್ರಶ್ನಿಸಿದರು. ಇದಕ್ಕೆ ‘ರಾಜಕೀಯ ಉತ್ತರ ನೀಡಬೇಡಿ’ ಎಂದೂ ಕೋರಿದರು. ಈ ಹಂತದಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು, ‘ರಾಜಕೀಯ ಪ್ರಶ್ನೆ ಕೇಳಿದರೆ, ರಾಜಕೀಯ ಉತ್ತರವನ್ನೇ ಪಡೆಯುತ್ತೀರಿ’ ಎಂದರು.</p>.<p>ಈ ಮಾತಿಗೆ ಪ್ರತಿಕ್ರಿಯಿಸಿದ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳುವ ವೇಳೆಯಲ್ಲಿ ಸಮಸ್ಯೆಯಾಯಿತು ಎಂದರು. ಅಲ್ಲದೆ, ಪರಿಹಾರ ಒದಗಿಸಲು ಸರ್ಕಾರ ಕೈಗೊಂಡ ಕ್ರಮಗಳನ್ನು ತಿಳಿಸಿದರು.</p>.<p>ಪಿ.ಎಂ ಕೇರ್ಸ್ ನಿಧಿಗೆ ಪಿಂಚಣಿ ಮೊತ್ತ ಮತ್ತು ನರೇಗಾ ಯೋಜನೆಯ ಕೂಲಿ ಮೊತ್ತವನ್ನು ನೀಡಿರುವ ನಿದರ್ಶನಗಳಿವೆ. ಸಾರ್ವಜನಿಕ ವಲಯದ ಸಂಸ್ಥೆಗಳೂ ಕೊಡುಗೆ ನೀಡಿವೆ. ಪಿ.ಎಂ ಕೇರ್ಸ್ ನಿಧಿಯನ್ನು ಕಳೆದ ವರ್ಷ ಮಾರ್ಚ್ನಲ್ಲಿ ತುರ್ತು ಸಂದರ್ಭದಲ್ಲಿ ನೆರವಾಗಲು ಸ್ಥಾಪಿಸಲಾಯಿತು ಎಂದು ತಿಳಿಸಿದರು.</p>.<p>ಕಾಂಗ್ರೆಸ್ ಪಕ್ಷವು ರಾಜೀವ್ಗಾಂಧಿ ಫೌಂಡೇಷನ್ನ ಖಾತೆ ತುಂಬಲು ಇಂತದೇ ಕೆಲಸ ಮಾಡಿತು. ಖಾತೆ ಮುಚ್ಚಬೇಕಾದ್ದರಿಂದ ಕಾಂಗ್ರೆಸ್ಗೆ ನೋವಾಗುತ್ತಿದೆ. ಫೌಂಡೇಷನ್ಗೆ ಚೀನಾದಿಂದಲೂ ನೆರವು ಬಂದಿದೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರೂ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="bodytext"><strong>ನವದೆಹಲಿ</strong>: ಪಿ.ಎಂ ಕೇರ್ಸ್ ನಿಧಿಗೆ ಬಂದಿರುವ ದೇಣಿಗೆಯ ವಿಷಯ ಸೋಮವಾರ ಲೋಕಸಭೆಯಲ್ಲಿ ಕಾಂಗ್ರೆಸ್ ಮತ್ತು ಸರ್ಕಾರದ ನಡುವೆ ಬಿಸಿ ಚರ್ಚೆಗೆ ಆಸ್ಪದವಾಯಿತು.</p>.<p class="bodytext">ಎಲ್ಐಸಿ ಜನರಿಗೆ ಅನುಕೂಲ ಕಲ್ಪಿಸುವ ಬದಲು ಈ ನಿಧಿಗೆ ನೆರವು ನೀಡಿತು ಎಂದು ವಿರೋಧಪಕ್ಷ ಆರೋಪಿಸಿತು. ಇದಕ್ಕೆ ಎದಿರೇಟು ನೀಡಿದ ಸಚಿವ ಅನುರಾಗ್ ಠಾಕೂರ್ ಅವರು ರಾಜೀವ್ಗಾಂಧಿ ಫೌಂಡೇಷನ್ ಚೀನಾದಿಂದಲೂ ದೇಣಿಗೆ ಸ್ವೀಕರಿಸಿದೆ ಎಂದು ಟೀಕಿಸಿದರು.</p>.<p class="bodytext">ಪ್ರಶ್ನೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಲೋಕಸಭೆಯ ಕಾಂಗ್ರೆಸ್ನ ಹಂಗಾಮಿ ನಾಯಕ ರಣವೀತ್ ಸಿಂಗ್ ಅವರು, ಲಾಕ್ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರು ಮತ್ತು ಕಡುಬಡವರು ತೀವ್ರ ಕಷ್ಟವನ್ನು ಅನುಭವಿಸಬೇಕಾಯಿತು ಎಂದು ದೂರಿದರು.</p>.<p>‘ಈ ಜನರಿಗೆ ಸಿಗಬೇಕಾದ ನೆರವು ಸಿಗಲಿಲ್ಲ. ಎಲ್ಐಸಿಯೂ ನಿಧಿಯನ್ನು ಕೇವಲ ಪಿಎಂ ಕೇರ್ಸ್ ನಿಧಿಗೆ ನೀಡುತ್ತದೆ. ಏಕೆ ಹೀಗೆ? ಎಂದು ಪ್ರಶ್ನಿಸಿದರು. ಇದಕ್ಕೆ ‘ರಾಜಕೀಯ ಉತ್ತರ ನೀಡಬೇಡಿ’ ಎಂದೂ ಕೋರಿದರು. ಈ ಹಂತದಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು, ‘ರಾಜಕೀಯ ಪ್ರಶ್ನೆ ಕೇಳಿದರೆ, ರಾಜಕೀಯ ಉತ್ತರವನ್ನೇ ಪಡೆಯುತ್ತೀರಿ’ ಎಂದರು.</p>.<p>ಈ ಮಾತಿಗೆ ಪ್ರತಿಕ್ರಿಯಿಸಿದ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳುವ ವೇಳೆಯಲ್ಲಿ ಸಮಸ್ಯೆಯಾಯಿತು ಎಂದರು. ಅಲ್ಲದೆ, ಪರಿಹಾರ ಒದಗಿಸಲು ಸರ್ಕಾರ ಕೈಗೊಂಡ ಕ್ರಮಗಳನ್ನು ತಿಳಿಸಿದರು.</p>.<p>ಪಿ.ಎಂ ಕೇರ್ಸ್ ನಿಧಿಗೆ ಪಿಂಚಣಿ ಮೊತ್ತ ಮತ್ತು ನರೇಗಾ ಯೋಜನೆಯ ಕೂಲಿ ಮೊತ್ತವನ್ನು ನೀಡಿರುವ ನಿದರ್ಶನಗಳಿವೆ. ಸಾರ್ವಜನಿಕ ವಲಯದ ಸಂಸ್ಥೆಗಳೂ ಕೊಡುಗೆ ನೀಡಿವೆ. ಪಿ.ಎಂ ಕೇರ್ಸ್ ನಿಧಿಯನ್ನು ಕಳೆದ ವರ್ಷ ಮಾರ್ಚ್ನಲ್ಲಿ ತುರ್ತು ಸಂದರ್ಭದಲ್ಲಿ ನೆರವಾಗಲು ಸ್ಥಾಪಿಸಲಾಯಿತು ಎಂದು ತಿಳಿಸಿದರು.</p>.<p>ಕಾಂಗ್ರೆಸ್ ಪಕ್ಷವು ರಾಜೀವ್ಗಾಂಧಿ ಫೌಂಡೇಷನ್ನ ಖಾತೆ ತುಂಬಲು ಇಂತದೇ ಕೆಲಸ ಮಾಡಿತು. ಖಾತೆ ಮುಚ್ಚಬೇಕಾದ್ದರಿಂದ ಕಾಂಗ್ರೆಸ್ಗೆ ನೋವಾಗುತ್ತಿದೆ. ಫೌಂಡೇಷನ್ಗೆ ಚೀನಾದಿಂದಲೂ ನೆರವು ಬಂದಿದೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರೂ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>