‘ಈ ಜನರಿಗೆ ಸಿಗಬೇಕಾದ ನೆರವು ಸಿಗಲಿಲ್ಲ. ಎಲ್ಐಸಿಯೂ ನಿಧಿಯನ್ನು ಕೇವಲ ಪಿಎಂ ಕೇರ್ಸ್ ನಿಧಿಗೆ ನೀಡುತ್ತದೆ. ಏಕೆ ಹೀಗೆ? ಎಂದು ಪ್ರಶ್ನಿಸಿದರು. ಇದಕ್ಕೆ ‘ರಾಜಕೀಯ ಉತ್ತರ ನೀಡಬೇಡಿ’ ಎಂದೂ ಕೋರಿದರು. ಈ ಹಂತದಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು, ‘ರಾಜಕೀಯ ಪ್ರಶ್ನೆ ಕೇಳಿದರೆ, ರಾಜಕೀಯ ಉತ್ತರವನ್ನೇ ಪಡೆಯುತ್ತೀರಿ’ ಎಂದರು.