<p><strong>ನವದೆಹಲಿ:</strong> ಪೆಟ್ರೋಲ್, ಡೀಸೆಲ್ ಬೆಲೆ 'ಸಾರ್ವಕಾಲಿಕ ಗರಿಷ್ಠ' ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭಾನುವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿ, ಮೋದಿಯವರು ತಮ್ಮ ಅಧಿಕಾರಾವಧಿಯಲ್ಲಿ ಹೇರಿರುವ ಅಬಕಾರಿ ಸುಂಕ ಹೆಚ್ಚಳವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.</p>.<p>ಇಂಧನ ಬೆಲೆ ಏರಿಕೆ ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿ, ಹಣದುಬ್ಬರದ ಪರಿಣಾಮದಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದರೆ, ಮೋದಿ ಸರ್ಕಾರ ತೆರಿಗೆ ಸಂಗ್ರಹದಲ್ಲಿ ನಿರತವಾಗಿದೆ ಎಂದು ಟೀಕಿಸಿದರು.</p>.<p>ವಾರದಲ್ಲಿ ನಾಲ್ಕನೇ ಬಾರಿಗೆ ಇಂಧನ ದರಗಳನ್ನು ಹೆಚ್ಚಿಸಿದ ನಂತರ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.</p>.<p>ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ₹ 85.70 ಕ್ಕೆ ತಲುಪಿದೆ ಮತ್ತು ಡೀಸೆಲ್ ಲೀಟರ್ಗೆ ₹ 75.88 ಕ್ಕೆ ತಲುಪಿದೆ ಎಂದು ಕಾಂಗ್ರೆಸ್ ವಕ್ತಾರ ಅಜಯ್ ಮಾಕನ್ ಹೇಳಿದ್ದಾರೆ.</p>.<p>ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್ಚು ಆಘಾತಕಾರಿ ಸಂಗತಿಯೆಂದರೆ, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ 2014ರ ಮೇ ತಿಂಗಳಲ್ಲಿ ನಾವು ಅಧಿಕಾರವನ್ನು ತೊರೆದಾಗ ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ 108 ಡಾಲರ್ ಆಗಿತ್ತು, ಆದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ ಲೀಟರ್ಗೆ ₹ 71.51 ಮತ್ತು ₹ 57.28 ಗಳಷ್ಟಿತ್ತು, ಈಗ ಕಚ್ಚಾ ತೈಲ ಬೆಲೆಗಳು ಅರ್ಧಕ್ಕೆ ಇಳಿದಿದ್ದರೂ ಕೂಡ ದೆಹಲಿಯಲ್ಲಿ ಇಂದು ₹ 85.70 ಮತ್ತು ₹ 75.88 ಗಳಷ್ಟಿದೆ ಎಂದು ಹೇಳಿದರು.</p>.<p>ಮೋದಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸುವ ಮೂಲಕ ಕಳೆದ ಆರೂವರೆ ವರ್ಷಗಳಲ್ಲಿ ₹ 20,00,000 ಕೋಟಿ ಹಣವನ್ನು ಗಳಿಸಿದೆ. ಆದರೆ ₹ 20 ಲಕ್ಷ ಕೋಟಿಗಿಂತ ಹೆಚ್ಚಿನ ಮೊತ್ತ ಎಲ್ಲಿಗೆ ಹೋಗಿದೆ ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಇದು ನರೇಂದ್ರ ಮೋದಿಯವರ ಬಂಡವಾಳಶಾಹಿ ಸ್ನೇಹಿತರ ಜೇಬಿಗೆ ಹೋಗಿದೆಯೇ? ಕಾಂಗ್ರೆಸ್ ಪಕ್ಷವು ಸರ್ಕಾರದಿಂದ ತಿಳಿದುಕೊಳ್ಳಲು ಬಯಸುವುದು ಇದನ್ನೇ ಎಂದು ಹೇಳಿದರು.</p>.<p>ಪೆಟ್ರೋಲ್ ಮತ್ತು ಡೀಸೆಲ್ ದರ ಶನಿವಾರ ಗರಿಷ್ಠ ಹಂತ ತಲುಪಿತ್ತು. ದೆಹಲಿಯಲ್ಲಿ ಪೆಟ್ರೋಲ್ ₹ 85.70 ಇದ್ದರೆ, ಮುಂಬೈನಲ್ಲಿ ₹ 92.28 ಆಗಿತ್ತು. ಡೀಸೆಲ್ ದರ ದೆಹಲಿಯಲ್ಲಿ ₹ 75.88 ಹಾಗೂ ಮುಂಬೈನಲ್ಲಿ ₹ 82.66ಕ್ಕೆ ತಲುಪಿತ್ತು.</p>.<p>ಮಾಕನ್ ತಮ್ಮ ಹೇಳಿಕೆಯಲ್ಲಿ, 'ನಮ್ಮ ಸೈನಿಕರ ತುಟ್ಟಿ ಭತ್ಯೆಯನ್ನು ಕಡಿತಗೊಳಿಸಲಾಗುತ್ತಿದೆ, ನಮ್ಮ ಎಂಎಸ್ಎಂಇಗಳು ಸಾಲ ಮರುಪಾವತಿಸಲು ಬ್ಯಾಂಕುಗಳಿಂದ ಒತ್ತಡಕ್ಕೆ ಒಳಗಾಗುತ್ತಿವೆ ಮತ್ತು ತೆರಿಗೆ ಅಧಿಕಾರಿಗಳ ಒತ್ತಡದಲ್ಲಿವೆ, ದೇಶಾದ್ಯಂತ ಭಾರಿ ನಿರುದ್ಯೋಗ ಎದುರಾಗಿದೆ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಆ ಹಣ ಎಲ್ಲಿ ಹೋಗಿದೆ?' ಎಂದರು.</p>.<p>'ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೇರಿರುವ ಅಬಕಾರಿ ಸುಂಕವನ್ನು ಕಡಿಮೆ ಮಾಡಿದರೆ, ಅಂದರೆ ₹ 23.78ಮತ್ತು ₹ 28.37ರಷ್ಟು ಕಡಿತಗೊಂಡು ಬೆಲೆಗಳು ₹ 61.92 (ಪೆಟ್ರೋಲ್) ಮತ್ತು ₹ 47.51 (ಡೀಸೆಲ್) ಕ್ಕೆ ಇಳಿಯುತ್ತವೆ'. ಆದ್ದರಿಂದ ಕಳೆದ ಆರು ವರ್ಷಗಳಲ್ಲಿ ವಿಧಿಸಿರುವ ಕೇಂದ್ರ ಅಬಕಾರಿ ಸುಂಕ ಹೆಚ್ಚಳವನ್ನು ಕೇಂದ್ರ ಸರ್ಕಾರ ತಕ್ಷಣ ಹಿಂತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಪೆಟ್ರೋಲ್, ಡೀಸೆಲ್ ಬೆಲೆ 'ಸಾರ್ವಕಾಲಿಕ ಗರಿಷ್ಠ' ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭಾನುವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿ, ಮೋದಿಯವರು ತಮ್ಮ ಅಧಿಕಾರಾವಧಿಯಲ್ಲಿ ಹೇರಿರುವ ಅಬಕಾರಿ ಸುಂಕ ಹೆಚ್ಚಳವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.</p>.<p>ಇಂಧನ ಬೆಲೆ ಏರಿಕೆ ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿ, ಹಣದುಬ್ಬರದ ಪರಿಣಾಮದಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದರೆ, ಮೋದಿ ಸರ್ಕಾರ ತೆರಿಗೆ ಸಂಗ್ರಹದಲ್ಲಿ ನಿರತವಾಗಿದೆ ಎಂದು ಟೀಕಿಸಿದರು.</p>.<p>ವಾರದಲ್ಲಿ ನಾಲ್ಕನೇ ಬಾರಿಗೆ ಇಂಧನ ದರಗಳನ್ನು ಹೆಚ್ಚಿಸಿದ ನಂತರ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.</p>.<p>ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ₹ 85.70 ಕ್ಕೆ ತಲುಪಿದೆ ಮತ್ತು ಡೀಸೆಲ್ ಲೀಟರ್ಗೆ ₹ 75.88 ಕ್ಕೆ ತಲುಪಿದೆ ಎಂದು ಕಾಂಗ್ರೆಸ್ ವಕ್ತಾರ ಅಜಯ್ ಮಾಕನ್ ಹೇಳಿದ್ದಾರೆ.</p>.<p>ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್ಚು ಆಘಾತಕಾರಿ ಸಂಗತಿಯೆಂದರೆ, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ 2014ರ ಮೇ ತಿಂಗಳಲ್ಲಿ ನಾವು ಅಧಿಕಾರವನ್ನು ತೊರೆದಾಗ ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ 108 ಡಾಲರ್ ಆಗಿತ್ತು, ಆದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ ಲೀಟರ್ಗೆ ₹ 71.51 ಮತ್ತು ₹ 57.28 ಗಳಷ್ಟಿತ್ತು, ಈಗ ಕಚ್ಚಾ ತೈಲ ಬೆಲೆಗಳು ಅರ್ಧಕ್ಕೆ ಇಳಿದಿದ್ದರೂ ಕೂಡ ದೆಹಲಿಯಲ್ಲಿ ಇಂದು ₹ 85.70 ಮತ್ತು ₹ 75.88 ಗಳಷ್ಟಿದೆ ಎಂದು ಹೇಳಿದರು.</p>.<p>ಮೋದಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸುವ ಮೂಲಕ ಕಳೆದ ಆರೂವರೆ ವರ್ಷಗಳಲ್ಲಿ ₹ 20,00,000 ಕೋಟಿ ಹಣವನ್ನು ಗಳಿಸಿದೆ. ಆದರೆ ₹ 20 ಲಕ್ಷ ಕೋಟಿಗಿಂತ ಹೆಚ್ಚಿನ ಮೊತ್ತ ಎಲ್ಲಿಗೆ ಹೋಗಿದೆ ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಇದು ನರೇಂದ್ರ ಮೋದಿಯವರ ಬಂಡವಾಳಶಾಹಿ ಸ್ನೇಹಿತರ ಜೇಬಿಗೆ ಹೋಗಿದೆಯೇ? ಕಾಂಗ್ರೆಸ್ ಪಕ್ಷವು ಸರ್ಕಾರದಿಂದ ತಿಳಿದುಕೊಳ್ಳಲು ಬಯಸುವುದು ಇದನ್ನೇ ಎಂದು ಹೇಳಿದರು.</p>.<p>ಪೆಟ್ರೋಲ್ ಮತ್ತು ಡೀಸೆಲ್ ದರ ಶನಿವಾರ ಗರಿಷ್ಠ ಹಂತ ತಲುಪಿತ್ತು. ದೆಹಲಿಯಲ್ಲಿ ಪೆಟ್ರೋಲ್ ₹ 85.70 ಇದ್ದರೆ, ಮುಂಬೈನಲ್ಲಿ ₹ 92.28 ಆಗಿತ್ತು. ಡೀಸೆಲ್ ದರ ದೆಹಲಿಯಲ್ಲಿ ₹ 75.88 ಹಾಗೂ ಮುಂಬೈನಲ್ಲಿ ₹ 82.66ಕ್ಕೆ ತಲುಪಿತ್ತು.</p>.<p>ಮಾಕನ್ ತಮ್ಮ ಹೇಳಿಕೆಯಲ್ಲಿ, 'ನಮ್ಮ ಸೈನಿಕರ ತುಟ್ಟಿ ಭತ್ಯೆಯನ್ನು ಕಡಿತಗೊಳಿಸಲಾಗುತ್ತಿದೆ, ನಮ್ಮ ಎಂಎಸ್ಎಂಇಗಳು ಸಾಲ ಮರುಪಾವತಿಸಲು ಬ್ಯಾಂಕುಗಳಿಂದ ಒತ್ತಡಕ್ಕೆ ಒಳಗಾಗುತ್ತಿವೆ ಮತ್ತು ತೆರಿಗೆ ಅಧಿಕಾರಿಗಳ ಒತ್ತಡದಲ್ಲಿವೆ, ದೇಶಾದ್ಯಂತ ಭಾರಿ ನಿರುದ್ಯೋಗ ಎದುರಾಗಿದೆ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಆ ಹಣ ಎಲ್ಲಿ ಹೋಗಿದೆ?' ಎಂದರು.</p>.<p>'ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೇರಿರುವ ಅಬಕಾರಿ ಸುಂಕವನ್ನು ಕಡಿಮೆ ಮಾಡಿದರೆ, ಅಂದರೆ ₹ 23.78ಮತ್ತು ₹ 28.37ರಷ್ಟು ಕಡಿತಗೊಂಡು ಬೆಲೆಗಳು ₹ 61.92 (ಪೆಟ್ರೋಲ್) ಮತ್ತು ₹ 47.51 (ಡೀಸೆಲ್) ಕ್ಕೆ ಇಳಿಯುತ್ತವೆ'. ಆದ್ದರಿಂದ ಕಳೆದ ಆರು ವರ್ಷಗಳಲ್ಲಿ ವಿಧಿಸಿರುವ ಕೇಂದ್ರ ಅಬಕಾರಿ ಸುಂಕ ಹೆಚ್ಚಳವನ್ನು ಕೇಂದ್ರ ಸರ್ಕಾರ ತಕ್ಷಣ ಹಿಂತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>