<p><strong>ನವದೆಹಲಿ:</strong> ಜಿಡಿಪಿ ಮತ್ತು ನಿರುದ್ಯೋಗದ ವ್ಯತಿರಿಕ್ತ ಅಂಕಿ ಅಂಶಗಳು ಹಾಗೂ ಶಿಲೀಂಧ್ರಕ್ಕೆ ಚಿಕಿತ್ಸೆ ನೀಡುವ ಔಷಧಿಗಳ ಕೊರತೆಯನ್ನು ಎತ್ತಿಹಿಡಿದಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.</p>.<p>'ಕನಿಷ್ಠ ಜಿಡಿಪಿ, ಗರಿಷ್ಠ ನಿರುದ್ಯೋಗ- ಪ್ರಧಾನ ಮಂತ್ರಿಗಳ ಅವಮಾನಕರ ಅಂಶವಾಗಿದೆ' ಎಂದು ಅವರು ಟ್ವಿಟರ್ನಲ್ಲಿ ತಿಳಿಸಿದ್ದಾರೆ. ಇದರೊಂದಿಗೆ 2014 ರಿಂದ ಯುವಕರಲ್ಲಿ ನಿರುದ್ಯೋಗ ಹೆಚ್ಚಳವನ್ನು ತೋರಿಸುವ ಗ್ರಾಫ್ ಅನ್ನು ಹಂಚಿಕೊಂಡಿದ್ದಾರೆ.</p>.<p>ದೇಶದ ಅರ್ಥ ವ್ಯವಸ್ಥೆಯು 2020–21ರಲ್ಲಿ ನಿರೀಕ್ಷೆಗಿಂತ ಕಡಿಮೆ ಪ್ರಮಾಣದಲ್ಲಿ ಕುಸಿತ ಕಂಡಿದೆ. ಈ ವರ್ಷದ ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಅರ್ಥ ವ್ಯವಸ್ಥೆಯು ಒಟ್ಟು ಶೇಕಡ (–)7.3ರಷ್ಟು ಕುಸಿದಿದೆ. ಕುಸಿತದ ಪ್ರಮಾಣವು ಶೇ (–) 8ರಷ್ಟು ಇರಲಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ಈ ಹಿಂದೆ ಅಂದಾಜಿಸಿತ್ತು. ಈ ಬೆನ್ನಲ್ಲೇ ರಾಹುಲ್ ಹೇಳಿಕೆ ನೀಡಿದ್ದಾರೆ.</p>.<p>ಮ್ಯೂಕರ್ ಮೈಕೊಸಿಸ್ ಅಥವಾ ಶಿಲೀಂಧ್ರದ ಚಿಕಿತ್ಸೆ ಕುರಿತು ಪ್ರಶ್ನೆಗಳನ್ನು ಕೇಳಿರುವ ರಾಹುಲ್, ಆ್ಯಂಫೊಟೆರಿಸಿನ್–ಬಿ ಕೊರತೆಯ ಬಗ್ಗೆ ಏನು ಮಾಡಲಾಗುತ್ತಿದೆ? ರೋಗಿಗಳು ಈ ಔಷಧಿಯನ್ನು ಪಡೆಯಲು ಮಾಡುತ್ತಿರುವ ಸಹಾಯದ ವಿಧಾನವೇನು'. ಚಿಕಿತ್ಸೆ ನೀಡುವ ಬದಲು, ಮೋದಿ ಸರ್ಕಾರ ಔಪಚಾರಿಕತೆಗಳಲ್ಲಿ ಸಾರ್ವಜನಿಕರನ್ನು ಏಕೆ ತೊಡಗಿಸಿಕೊಂಡಿದೆ' ಎಂದವರು ಟ್ವೀಟ್ ಮಾಡಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/business/commerce-news/indian-economy-contracts-73-pc-in-fy21-834938.html" itemprop="url">ಜಿಡಿಪಿ: ಶೇಕಡ (–)7.3ರಷ್ಟು ಕುಸಿತ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಜಿಡಿಪಿ ಮತ್ತು ನಿರುದ್ಯೋಗದ ವ್ಯತಿರಿಕ್ತ ಅಂಕಿ ಅಂಶಗಳು ಹಾಗೂ ಶಿಲೀಂಧ್ರಕ್ಕೆ ಚಿಕಿತ್ಸೆ ನೀಡುವ ಔಷಧಿಗಳ ಕೊರತೆಯನ್ನು ಎತ್ತಿಹಿಡಿದಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.</p>.<p>'ಕನಿಷ್ಠ ಜಿಡಿಪಿ, ಗರಿಷ್ಠ ನಿರುದ್ಯೋಗ- ಪ್ರಧಾನ ಮಂತ್ರಿಗಳ ಅವಮಾನಕರ ಅಂಶವಾಗಿದೆ' ಎಂದು ಅವರು ಟ್ವಿಟರ್ನಲ್ಲಿ ತಿಳಿಸಿದ್ದಾರೆ. ಇದರೊಂದಿಗೆ 2014 ರಿಂದ ಯುವಕರಲ್ಲಿ ನಿರುದ್ಯೋಗ ಹೆಚ್ಚಳವನ್ನು ತೋರಿಸುವ ಗ್ರಾಫ್ ಅನ್ನು ಹಂಚಿಕೊಂಡಿದ್ದಾರೆ.</p>.<p>ದೇಶದ ಅರ್ಥ ವ್ಯವಸ್ಥೆಯು 2020–21ರಲ್ಲಿ ನಿರೀಕ್ಷೆಗಿಂತ ಕಡಿಮೆ ಪ್ರಮಾಣದಲ್ಲಿ ಕುಸಿತ ಕಂಡಿದೆ. ಈ ವರ್ಷದ ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಅರ್ಥ ವ್ಯವಸ್ಥೆಯು ಒಟ್ಟು ಶೇಕಡ (–)7.3ರಷ್ಟು ಕುಸಿದಿದೆ. ಕುಸಿತದ ಪ್ರಮಾಣವು ಶೇ (–) 8ರಷ್ಟು ಇರಲಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ಈ ಹಿಂದೆ ಅಂದಾಜಿಸಿತ್ತು. ಈ ಬೆನ್ನಲ್ಲೇ ರಾಹುಲ್ ಹೇಳಿಕೆ ನೀಡಿದ್ದಾರೆ.</p>.<p>ಮ್ಯೂಕರ್ ಮೈಕೊಸಿಸ್ ಅಥವಾ ಶಿಲೀಂಧ್ರದ ಚಿಕಿತ್ಸೆ ಕುರಿತು ಪ್ರಶ್ನೆಗಳನ್ನು ಕೇಳಿರುವ ರಾಹುಲ್, ಆ್ಯಂಫೊಟೆರಿಸಿನ್–ಬಿ ಕೊರತೆಯ ಬಗ್ಗೆ ಏನು ಮಾಡಲಾಗುತ್ತಿದೆ? ರೋಗಿಗಳು ಈ ಔಷಧಿಯನ್ನು ಪಡೆಯಲು ಮಾಡುತ್ತಿರುವ ಸಹಾಯದ ವಿಧಾನವೇನು'. ಚಿಕಿತ್ಸೆ ನೀಡುವ ಬದಲು, ಮೋದಿ ಸರ್ಕಾರ ಔಪಚಾರಿಕತೆಗಳಲ್ಲಿ ಸಾರ್ವಜನಿಕರನ್ನು ಏಕೆ ತೊಡಗಿಸಿಕೊಂಡಿದೆ' ಎಂದವರು ಟ್ವೀಟ್ ಮಾಡಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/business/commerce-news/indian-economy-contracts-73-pc-in-fy21-834938.html" itemprop="url">ಜಿಡಿಪಿ: ಶೇಕಡ (–)7.3ರಷ್ಟು ಕುಸಿತ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>