ಅಮೃತಸರ: ಪಂಜಾಬ್ನಲ್ಲಿ ಮೇ 29 ರಂದು ನಡೆದ ಗುಂಡಿನ ದಾಳಿಯಲ್ಲಿ ಹತ್ಯೆಗೀಡಾದ ಪಂಜಾಬಿ ಗಾಯಕ, ಕಾಂಗ್ರೆಸ್ ಮುಖಂಡ ಸಿಧು ಮೂಸೆವಾಲಾ ಅವರ ಕುಟುಂಬಸ್ಥರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಅವರ ಗ್ರಾಮ ಮೂಸಾದಲ್ಲಿ ಭೇಟಿಯಾದರು.
ಮೂಸೆವಾಲಾ ಅವರು ಡಿಸೆಂಬರ್ 2021 ರಲ್ಲಿ ಕಾಂಗ್ರೆಸ್ ಸೇರಿದ್ದರು. 2022 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮಾನ್ಸಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ, ಎಎಪಿ ವಿರುದ್ಧ ಸೋಲುಂಡಿದ್ದರು.
‘ಕಾಂಗ್ರೆಸ್ನ ಭರವಸೆಯ ನಾಯಕ ಮತ್ತು ಪ್ರತಿಭಾವಂತ ಕಲಾವಿದ ಸಿದ್ದು ಮೂಸೆವಾಲಾ ಅವರ ಹತ್ಯೆಯಿಂದ ತೀವ್ರ ಆಘಾತವಾಗಿದೆ’ ಎಂದು ಗಾಂಧಿ ಈ ಹಿಂದೆ ಟ್ವೀಟ್ ಮಾಡಿದ್ದರು.
#WATCH | Punjab: Congress leader Rahul Gandhi arrives at the residence of late singer and party leader Sidhu Moose Wala at his village Moosa in Mansa. pic.twitter.com/TpXDopNVHC