‘ಈ ಪ್ರತಿಭಟನೆಯನ್ನು ‘ಜನ ಜಾಗರಣ ಅಭಿಯಾನ‘ ಎಂದು ಕರೆಯಲಾಗುತ್ತಿದ್ದು, ಬೆಲೆ ಏರಿಕೆ ವಿರುದ್ಧದ ಜನರ ಆಕ್ರೋಶಕ್ಕೆ ಪಕ್ಷವು ಈ ಮೂಲಕ ದನಿಯಾಗಲಿದೆ. ಸಿಎನ್ಜಿ, ಅಡುಗೆ ಅನಿಲ, ಡೀಸೆಲ್, ಪೆಟ್ರೋಲ್, ಖಾದ್ಯ ತೈಲ, ಬೇಳೆ ಕಾಳುಗಳು ಹಾಗೂ ಇತರ ಅಗತ್ಯ ವಸ್ತುಗಳ ಬೆಲೆಗಳ ಹೆಚ್ಚಳದ ವಿರುದ್ಧ ಜನರ ಸಂಘಟನೆಯನ್ನು ಗಟ್ಟಿಗೊಳಿಸಲಾಗುವುದು’ ಎಂದು ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ಹೇಳಿದರು.