<p><strong>ನಾಗಪುರ:</strong> ‘ದೇಶಕ್ಕೆ ಸುಸ್ಥಿರ ಅಭಿವೃದ್ಧಿ ಅಗತ್ಯವಿದೆಯೇ ಹೊರತು ಅಡ್ಡಹಾದಿಯ ರಾಜಕೀಯವಲ್ಲ. ಕೆಲವು ಪಕ್ಷಗಳು ದೇಶದ ಆರ್ಥಿಕತೆಯನ್ನು ನಾಶಮಾಡಲು ಯತ್ನಿಸುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಆರೋಪಿಸಿದರು.</p>.<p>₹ 75 ಸಾವಿರ ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಇಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ‘ಅಭಿವೃದ್ಧಿಯ ಕಡೆಗೆನಾವು ಸಂಕುಚಿತವಾಗಿ ಮುನ್ನಡೆದರೆ ಸೀಮಿತ ಅವಕಾಶಗಳು ಮಾತ್ರವೇ ಒದಗಿ ಬರುತ್ತವೆ. ಕಳೆದ ಎಂಟು ವರ್ಷಗಳಲ್ಲಿ ಈ ಮನೋಭಾವವನ್ನು ಬದಲಾಯಿಸಿರುವ ನಾವು ಎಲ್ಲರ ನಂಬಿಕೆ, ಬೆಂಬಲ ಮತ್ತು ಪ್ರಯತ್ನಗಳ ಜೊತೆ ಮುಂದುವರಿದಿದ್ದೇವೆ’ ಎಂದರು.</p>.<p>‘ನಾಗಪುರದಲ್ಲಿ ಚಾಲನೆ ನೀಡಿರುವ ಯೋಜನೆಗಳು ಅಭಿವೃದ್ಧಿಗೆ ಸಮಗ್ರತಾ ದೃಷ್ಟಿಯನ್ನು ನೀಡಿವೆ. ಹುಸಿ ಭರವಸೆಗಳನ್ನು ನೀಡಿ ಅಧಿಕಾರಕ್ಕೇರಿ ತೆರಿಗೆದಾರರನ್ನು ದೋಚುವ ರಾಜಕಾರಣಿಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು’ ಎಂದೂ ಅವರು ಕಿವಿಮಾತು ಹೇಳಿದರು.</p>.<p>‘ಸುಸ್ಥಿರ ಅಭಿವೃದ್ಧಿಯ ಕಡೆಗೆ ಗಮನಹರಿಸಲು ಎಲ್ಲಾ ರಾಜಕಾರಣಿಗಳಲ್ಲಿ ಮನವಿ ಮಾಡುತ್ತೇನೆ. ಇದರಿಂದ ಚುನಾವಣೆಗಳಲ್ಲಿ ಗೆಲ್ಲಬಹುದು’ ಎಂದೂ ಮೋದಿ ಪ್ರತಿಪಾದಿಸಿದರು.</p>.<p>‘ಈ ಹಿಂದೆ ಮತಬ್ಯಾಂಕ್ ರಾಜಕಾರಣ ಮತ್ತು ಭ್ರಷ್ಟಾಚಾರದಿಂದಾಗಿ ತೆರಿಗೆದಾರರ ಹಣ ವ್ಯರ್ಥವಾಗುತ್ತಿತ್ತು. ಈಗ ನಮ್ಮ ಸರ್ಕಾರವು ಮುಂದಿನ ಭವಿಷ್ಯವನ್ನು ಉಜ್ವಲಗೊಳಿಸುವ ದೃಷ್ಟಿಯಿಂದ ಸುಸ್ಥಿರ ಮತ್ತು ಆಧುನಿಕ ಮೂಲಸೌಕರ್ಯ ಅಭಿವೃದ್ಧಿಯತ್ತ ಗಮನ ಕೇಂದ್ರೀಕರಿಸಿದೆ’ ಎಂದೂ ತಿಳಿಸಿದರು.</p>.<p>ಬಾಂದ್ರಾ ಜಿಲ್ಲೆಯ ಗೋಸಿಖುರ್ದ್ ಅಣೆಕಟ್ಟೆ ಯೋಜನೆಯು ಮೂರು ದಶಕಗಳಿಂದ ವಿಳಂಬವಾಗಿರುವುದನ್ನು ಉದಾಹರಿಸಿ, ಮಹಾರಾಷ್ಟ್ರದಲ್ಲಿ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಯೋಜನೆಯು ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ ಎಂದರು.</p>.<p><strong>ಚಾಲನೆ ದೊರೆತ ಯೋಜನೆಗಳು</strong></p>.<p>*ನಾಗಪುರ–ಮುಂಬೈ ಸಮೃದ್ಧಿ ಎಕ್ಸ್ಪ್ರೆಸ್ ಹೆದ್ದಾರಿಯ ಮೊದಲ ಹಂತ ಉದ್ಘಾಟನೆ (ಈ ಹೆದ್ದಾರಿಯು ನಾಗಪುರದಿಂದ ಶಿರಡಿಗೆ ಸಂಪರ್ಕ ಕಲ್ಪಿಸುತ್ತಿದೆ)</p>.<p>* ನಾಗಪುರ– ಬಿಲಾಸ್ಪುರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ</p>.<p>*ನಾಗಪುರ ಮೆಟ್ರೊ ರೈಲು ಯೋಜನೆಯ ಮೊದಲ ಹಂತ ಉದ್ಘಾಟನೆ</p>.<p>*ನಾಗಪುರ ಏಮ್ಸ್ ಘಟಕ ಉದ್ಘಾಟನೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗಪುರ:</strong> ‘ದೇಶಕ್ಕೆ ಸುಸ್ಥಿರ ಅಭಿವೃದ್ಧಿ ಅಗತ್ಯವಿದೆಯೇ ಹೊರತು ಅಡ್ಡಹಾದಿಯ ರಾಜಕೀಯವಲ್ಲ. ಕೆಲವು ಪಕ್ಷಗಳು ದೇಶದ ಆರ್ಥಿಕತೆಯನ್ನು ನಾಶಮಾಡಲು ಯತ್ನಿಸುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಆರೋಪಿಸಿದರು.</p>.<p>₹ 75 ಸಾವಿರ ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಇಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ‘ಅಭಿವೃದ್ಧಿಯ ಕಡೆಗೆನಾವು ಸಂಕುಚಿತವಾಗಿ ಮುನ್ನಡೆದರೆ ಸೀಮಿತ ಅವಕಾಶಗಳು ಮಾತ್ರವೇ ಒದಗಿ ಬರುತ್ತವೆ. ಕಳೆದ ಎಂಟು ವರ್ಷಗಳಲ್ಲಿ ಈ ಮನೋಭಾವವನ್ನು ಬದಲಾಯಿಸಿರುವ ನಾವು ಎಲ್ಲರ ನಂಬಿಕೆ, ಬೆಂಬಲ ಮತ್ತು ಪ್ರಯತ್ನಗಳ ಜೊತೆ ಮುಂದುವರಿದಿದ್ದೇವೆ’ ಎಂದರು.</p>.<p>‘ನಾಗಪುರದಲ್ಲಿ ಚಾಲನೆ ನೀಡಿರುವ ಯೋಜನೆಗಳು ಅಭಿವೃದ್ಧಿಗೆ ಸಮಗ್ರತಾ ದೃಷ್ಟಿಯನ್ನು ನೀಡಿವೆ. ಹುಸಿ ಭರವಸೆಗಳನ್ನು ನೀಡಿ ಅಧಿಕಾರಕ್ಕೇರಿ ತೆರಿಗೆದಾರರನ್ನು ದೋಚುವ ರಾಜಕಾರಣಿಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು’ ಎಂದೂ ಅವರು ಕಿವಿಮಾತು ಹೇಳಿದರು.</p>.<p>‘ಸುಸ್ಥಿರ ಅಭಿವೃದ್ಧಿಯ ಕಡೆಗೆ ಗಮನಹರಿಸಲು ಎಲ್ಲಾ ರಾಜಕಾರಣಿಗಳಲ್ಲಿ ಮನವಿ ಮಾಡುತ್ತೇನೆ. ಇದರಿಂದ ಚುನಾವಣೆಗಳಲ್ಲಿ ಗೆಲ್ಲಬಹುದು’ ಎಂದೂ ಮೋದಿ ಪ್ರತಿಪಾದಿಸಿದರು.</p>.<p>‘ಈ ಹಿಂದೆ ಮತಬ್ಯಾಂಕ್ ರಾಜಕಾರಣ ಮತ್ತು ಭ್ರಷ್ಟಾಚಾರದಿಂದಾಗಿ ತೆರಿಗೆದಾರರ ಹಣ ವ್ಯರ್ಥವಾಗುತ್ತಿತ್ತು. ಈಗ ನಮ್ಮ ಸರ್ಕಾರವು ಮುಂದಿನ ಭವಿಷ್ಯವನ್ನು ಉಜ್ವಲಗೊಳಿಸುವ ದೃಷ್ಟಿಯಿಂದ ಸುಸ್ಥಿರ ಮತ್ತು ಆಧುನಿಕ ಮೂಲಸೌಕರ್ಯ ಅಭಿವೃದ್ಧಿಯತ್ತ ಗಮನ ಕೇಂದ್ರೀಕರಿಸಿದೆ’ ಎಂದೂ ತಿಳಿಸಿದರು.</p>.<p>ಬಾಂದ್ರಾ ಜಿಲ್ಲೆಯ ಗೋಸಿಖುರ್ದ್ ಅಣೆಕಟ್ಟೆ ಯೋಜನೆಯು ಮೂರು ದಶಕಗಳಿಂದ ವಿಳಂಬವಾಗಿರುವುದನ್ನು ಉದಾಹರಿಸಿ, ಮಹಾರಾಷ್ಟ್ರದಲ್ಲಿ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಯೋಜನೆಯು ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ ಎಂದರು.</p>.<p><strong>ಚಾಲನೆ ದೊರೆತ ಯೋಜನೆಗಳು</strong></p>.<p>*ನಾಗಪುರ–ಮುಂಬೈ ಸಮೃದ್ಧಿ ಎಕ್ಸ್ಪ್ರೆಸ್ ಹೆದ್ದಾರಿಯ ಮೊದಲ ಹಂತ ಉದ್ಘಾಟನೆ (ಈ ಹೆದ್ದಾರಿಯು ನಾಗಪುರದಿಂದ ಶಿರಡಿಗೆ ಸಂಪರ್ಕ ಕಲ್ಪಿಸುತ್ತಿದೆ)</p>.<p>* ನಾಗಪುರ– ಬಿಲಾಸ್ಪುರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ</p>.<p>*ನಾಗಪುರ ಮೆಟ್ರೊ ರೈಲು ಯೋಜನೆಯ ಮೊದಲ ಹಂತ ಉದ್ಘಾಟನೆ</p>.<p>*ನಾಗಪುರ ಏಮ್ಸ್ ಘಟಕ ಉದ್ಘಾಟನೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>