<p><strong>ಕರಿಂನಗರ</strong>: ತೆಲಂಗಾಣ ಹೈಕೋರ್ಟ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಕೀಲ ದಂಪತಿಯನ್ನು ಬುಧವಾರ ಹಾಡಹಗಲೇ ಪೆದ್ದಪಳ್ಳಿ ಜಿಲ್ಲೆಯಲ್ಲಿ ಬರ್ಬರವಾಗಿ ಹತ್ಯೆಮಾಡಲಾಗಿದೆ.</p>.<p>ವಕೀಲರಾದ ಗತ್ತು ವಾಮನ್ ರಾವ್ ಮತ್ತು ಅವರ ಪತ್ನಿ ಕಾರಿನಲ್ಲಿ ತೆರಳುತ್ತಿದ್ದಾಗ ಮಧ್ಯಾಹ್ನ 2.30ರ ವೇಳೆಗೆ ಹಿಂಬಾಲಿಸಿ ಬಂದ ಇಬ್ಬರು ವ್ಯಕ್ತಿಗಳು ರಾಮಗಿರಿ ಮಂಡಲ್ದ ಗ್ರಾಮವೊಂದರ ಬಳಿ ದಾಳಿ ಮಾಡಿದ್ದಾರೆ. ಚೂರಿ ಇರಿದು ಇಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದರೆ.</p>.<p>‘ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಿದೆ’ ಎಂದು ಗೃಹ ಸಚಿವ ಮಹಮೂದ್ ಅಲಿ ತಿಳಿಸಿದ್ದಾರೆ.</p>.<p>ಸ್ಥಳೀಯ ಟಿಆರ್ಎಸ್ ನಾಯಕರೊಬ್ಬರು ಈ ಹತ್ಯೆಗೆ ಕಾರಣ ಎಂದು ರಾವ್ ಸಾವಿಗೆ ಮುನ್ನ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳುತಿಳಿಸಿವೆ.</p>.<p>‘ಹತ್ಯೆ ಮಾಡಿದ ಇಬ್ಬರು ವೃತ್ತಿಪರ ಕೊಲೆಗಾರರು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳ ಪತ್ತೆಗೆ ಆರುತಂಡಗಳನ್ನು ರಚಿಸಲಾಗಿದೆ’ ಎಂದು ರಾಮಗುಂಡಂ ಪೊಲೀಸ್ ಆಯುಕ್ತ ವಿ. ಸತ್ಯನಾರಾಯಣ ತಿಳಿಸಿದ್ದಾರೆ.</p>.<p>ಈ ಹತ್ಯೆಯ ಹಿಂದೆ ಟಿಆರ್ಎಸ್ ಸ್ಥಳೀಯ ನಾಯಕನ ಕೈವಾಡವಿದೆ ಎಂದು ವಕೀಲ ರಾವ್ ಅವರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ತೆಲಂಗಾಣ ವಕೀಲರ ಪರಿಷತ್ ಈ ಕೃತ್ಯವನ್ನು ಖಂಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕರಿಂನಗರ</strong>: ತೆಲಂಗಾಣ ಹೈಕೋರ್ಟ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಕೀಲ ದಂಪತಿಯನ್ನು ಬುಧವಾರ ಹಾಡಹಗಲೇ ಪೆದ್ದಪಳ್ಳಿ ಜಿಲ್ಲೆಯಲ್ಲಿ ಬರ್ಬರವಾಗಿ ಹತ್ಯೆಮಾಡಲಾಗಿದೆ.</p>.<p>ವಕೀಲರಾದ ಗತ್ತು ವಾಮನ್ ರಾವ್ ಮತ್ತು ಅವರ ಪತ್ನಿ ಕಾರಿನಲ್ಲಿ ತೆರಳುತ್ತಿದ್ದಾಗ ಮಧ್ಯಾಹ್ನ 2.30ರ ವೇಳೆಗೆ ಹಿಂಬಾಲಿಸಿ ಬಂದ ಇಬ್ಬರು ವ್ಯಕ್ತಿಗಳು ರಾಮಗಿರಿ ಮಂಡಲ್ದ ಗ್ರಾಮವೊಂದರ ಬಳಿ ದಾಳಿ ಮಾಡಿದ್ದಾರೆ. ಚೂರಿ ಇರಿದು ಇಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದರೆ.</p>.<p>‘ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಿದೆ’ ಎಂದು ಗೃಹ ಸಚಿವ ಮಹಮೂದ್ ಅಲಿ ತಿಳಿಸಿದ್ದಾರೆ.</p>.<p>ಸ್ಥಳೀಯ ಟಿಆರ್ಎಸ್ ನಾಯಕರೊಬ್ಬರು ಈ ಹತ್ಯೆಗೆ ಕಾರಣ ಎಂದು ರಾವ್ ಸಾವಿಗೆ ಮುನ್ನ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳುತಿಳಿಸಿವೆ.</p>.<p>‘ಹತ್ಯೆ ಮಾಡಿದ ಇಬ್ಬರು ವೃತ್ತಿಪರ ಕೊಲೆಗಾರರು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳ ಪತ್ತೆಗೆ ಆರುತಂಡಗಳನ್ನು ರಚಿಸಲಾಗಿದೆ’ ಎಂದು ರಾಮಗುಂಡಂ ಪೊಲೀಸ್ ಆಯುಕ್ತ ವಿ. ಸತ್ಯನಾರಾಯಣ ತಿಳಿಸಿದ್ದಾರೆ.</p>.<p>ಈ ಹತ್ಯೆಯ ಹಿಂದೆ ಟಿಆರ್ಎಸ್ ಸ್ಥಳೀಯ ನಾಯಕನ ಕೈವಾಡವಿದೆ ಎಂದು ವಕೀಲ ರಾವ್ ಅವರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ತೆಲಂಗಾಣ ವಕೀಲರ ಪರಿಷತ್ ಈ ಕೃತ್ಯವನ್ನು ಖಂಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>