ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ: ವಕೀಲ ದಂಪತಿ ಬರ್ಬರ ಹತ್ಯೆ

Last Updated 17 ಫೆಬ್ರುವರಿ 2021, 21:43 IST
ಅಕ್ಷರ ಗಾತ್ರ

ಕರಿಂನಗರ: ತೆಲಂಗಾಣ ಹೈಕೋರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಕೀಲ ದಂಪತಿಯನ್ನು ಬುಧವಾರ ಹಾಡಹಗಲೇ ಪೆದ್ದಪಳ್ಳಿ ಜಿಲ್ಲೆಯಲ್ಲಿ ಬರ್ಬರವಾಗಿ ಹತ್ಯೆಮಾಡಲಾಗಿದೆ.

ವಕೀಲರಾದ ಗತ್ತು ವಾಮನ್‌ ರಾವ್‌ ಮತ್ತು ಅವರ ಪತ್ನಿ ಕಾರಿನಲ್ಲಿ ತೆರಳುತ್ತಿದ್ದಾಗ ಮಧ್ಯಾಹ್ನ 2.30ರ ವೇಳೆಗೆ ಹಿಂಬಾಲಿಸಿ ಬಂದ ಇಬ್ಬರು ವ್ಯಕ್ತಿಗಳು ರಾಮಗಿರಿ ಮಂಡಲ್‌ದ ಗ್ರಾಮವೊಂದರ ಬಳಿ ದಾಳಿ ಮಾಡಿದ್ದಾರೆ. ಚೂರಿ ಇರಿದು ಇಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದರೆ.

‘ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಿದೆ’ ಎಂದು ಗೃಹ ಸಚಿವ ಮಹಮೂದ್‌ ಅಲಿ ತಿಳಿಸಿದ್ದಾರೆ.

ಸ್ಥಳೀಯ ಟಿಆರ್‌ಎಸ್‌ ನಾಯಕರೊಬ್ಬರು ಈ ಹತ್ಯೆಗೆ ಕಾರಣ ಎಂದು ರಾವ್‌ ಸಾವಿಗೆ ಮುನ್ನ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸ್‌ ಮೂಲಗಳುತಿಳಿಸಿವೆ.

‘ಹತ್ಯೆ ಮಾಡಿದ ಇಬ್ಬರು ವೃತ್ತಿಪರ ಕೊಲೆಗಾರರು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳ ಪತ್ತೆಗೆ ಆರುತಂಡಗಳನ್ನು ರಚಿಸಲಾಗಿದೆ’ ಎಂದು ರಾಮಗುಂಡಂ ಪೊಲೀಸ್‌ ಆಯುಕ್ತ ವಿ. ಸತ್ಯನಾರಾಯಣ ತಿಳಿಸಿದ್ದಾರೆ.

ಈ ಹತ್ಯೆಯ ಹಿಂದೆ ಟಿಆರ್‌ಎಸ್‌ ಸ್ಥಳೀಯ ನಾಯಕನ ಕೈವಾಡವಿದೆ ಎಂದು ವಕೀಲ ರಾವ್‌ ಅವರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ತೆಲಂಗಾಣ ವಕೀಲರ ಪರಿಷತ್‌ ಈ ಕೃತ್ಯವನ್ನು ಖಂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT