‘ದಂಪತಿ ಬಳಿ ಹಣ ಇರಲಿಲ್ಲ ಎನ್ನುವುದು ಮಾತುಕತೆ ಸಂದರ್ಭದಲ್ಲಿ ಗೊತ್ತಾಯಿತು. ಚಿನ್ನವನ್ನು ಅಡವಿಟ್ಟ ವಿಷಯವೂ ತಿಳಿಯಿತು. ಹೀಗಾಗಿ, ನಾಲ್ಕು ಅಥವಾ ಐದು ಫ್ಯಾನ್ಗಳನ್ನು ದೇಣಿಗೆ ನೀಡುವಂತೆ ಕೋರಿದೆ. ನಿಮ್ಮ ಸಾಮರ್ಥ್ಯವನ್ನು ಮೀರಿ ನೀಡುವುದು ಬೇಡ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದೆ. ಆದರೆ, ದಂಪತಿ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರು’ ಎಂದು ಡಾ. ರವೀಂದ್ರನ್ ತಿಳಿಸಿದ್ದಾರೆ.