‘ಆರೋಪಿಯು ಒಂದು ವೇಳೆ ಆರ್ಥಿಕವಾಗಿ ದುರ್ಬಲ ಸ್ತರಕ್ಕೆ ಸೇರಿದ್ದಲ್ಲಿ, ಕಾರಾಗೃಹವಾಸದಿಂದ ಆತನಿಗೆ ಆಗುವ ಹಾನಿ ಅಗಾಧವಾಗಿರುತ್ತದೆ. ಆರೋಪಿಯು ತಕ್ಷಣಕ್ಕೆ ಜೀವನೋಪಾಯ ಕಳೆದುಕೊಳ್ಳುತ್ತಾನೆ. ಹಲವು ಪ್ರಕರಣಗಳಲ್ಲಿ, ಆರೋಪಿಗಳ ಕುಟುಂಬಗಳು ಚದುರಿಹೋಗುತ್ತವೆ. ಕೌಟುಂಬಿಕ ಬಾಂಧವ್ಯ ಛಿದ್ರಗೊಳ್ಳುವ ಜೊತೆಗೆ ಸಮಾಜದಿಂದ ಬೇರ್ಪಡುತ್ತವೆ’ ಎಂದು ನ್ಯಾಯಪೀಠ ಹೇಳಿದೆ.