<p><strong>ನವದೆಹಲಿ</strong>: ದೇಶದಲ್ಲಿನ ಜೈಲುಗಳಲ್ಲಿ ಅವುಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿಚಾರಣಾಧೀನ ಕೈದಿಗಳನ್ನು ಇರಿಸಲಾಗಿದೆ. ಅವರ ಸ್ಥಿತಿಯೂ ದಿಗಿಲು ಹುಟ್ಟಿಸುವಂತಿದೆ. ಹೀಗಾಗಿ, ಎಲ್ಲ ನ್ಯಾಯಾಲಯಗಳು ವಿಚಾರಣೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಪ್ರಕರಣಗಳನ್ನು ಇತ್ಯರ್ಥಗೊಳಿಸುವುದನ್ನು ಖಾತರಿಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.</p>.<p>ಒಂದು ವೇಳೆ ನ್ಯಾಯಾಲಯಗಳು ನಿಗದಿತ ಅವಧಿಯೊಳಗೆ ವಿಚಾರಣೆಯನ್ನು ಪೂರ್ಣಗೊಳಿಸದೇ ಇದ್ದಲ್ಲಿ, ವ್ಯಕ್ತಿಗೆ ಆಗಬಹುದಾದ ಹಾನಿ, ಅನ್ಯಾಯ ಅಳತೆಗೂ ಮೀರಿದ್ದಾಗಿರುತ್ತದೆ ಎಂದು ನ್ಯಾಯಮೂರ್ತಿಗಳಾದ ರವೀಂದ್ರ ಭಟ್ ಹಾಗೂ ದೀಪಂಕರ್ ದತ್ತ ಅವರಿದ್ದ ನ್ಯಾಯಪೀಠ ಹೇಳಿದೆ.</p>.<p>ಎನ್ಡಿಪಿಎಸ್ ಕಾಯ್ದೆಯಡಿ ದಾಖಲಾದ ಪ್ರಕರಣದ ಆರೋಪಿಯೊಬ್ಬರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠ ನಡೆಸಿತು. ಅರ್ಜಿದಾರ ಏಳು ವರ್ಷ ಹಾಗೂ ನಾಲ್ಕು ತಿಂಗಳುಗಳಿಂದ ಕಸ್ಟಡಿಯಲ್ಲಿದ್ದಾರೆ. ಹೀಗಾಗಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ನ್ಯಾಯಪೀಠ ಆದೇಶಿಸಿತು.</p>.<p>‘ಆರೋಪಿಯು ಒಂದು ವೇಳೆ ಆರ್ಥಿಕವಾಗಿ ದುರ್ಬಲ ಸ್ತರಕ್ಕೆ ಸೇರಿದ್ದಲ್ಲಿ, ಕಾರಾಗೃಹವಾಸದಿಂದ ಆತನಿಗೆ ಆಗುವ ಹಾನಿ ಅಗಾಧವಾಗಿರುತ್ತದೆ. ಆರೋಪಿಯು ತಕ್ಷಣಕ್ಕೆ ಜೀವನೋಪಾಯ ಕಳೆದುಕೊಳ್ಳುತ್ತಾನೆ. ಹಲವು ಪ್ರಕರಣಗಳಲ್ಲಿ, ಆರೋಪಿಗಳ ಕುಟುಂಬಗಳು ಚದುರಿಹೋಗುತ್ತವೆ. ಕೌಟುಂಬಿಕ ಬಾಂಧವ್ಯ ಛಿದ್ರಗೊಳ್ಳುವ ಜೊತೆಗೆ ಸಮಾಜದಿಂದ ಬೇರ್ಪಡುತ್ತವೆ’ ಎಂದು ನ್ಯಾಯಪೀಠ ಹೇಳಿದೆ.</p>.<p>‘ಇಂಥ ಸಂಗತಿಗಳ ಬಗ್ಗೆ ನ್ಯಾಯಾಲಯಗಳು ಹೆಚ್ಚು ಸಂವೇದನಾಶೀಲವಾಗಿರಬೇಕು. ಅದರಲ್ಲೂ, ಕಠಿಣ ನಿಯಮಗಳನ್ನು ಒಳಗೊಂಡಿರುವ ಕಾಯ್ದೆಗಳಡಿ ದಾಖಲಾದ ಪ್ರಕರಣಗಳ ವಿಚಾರಣೆಗೆ ವೇಗ ನೀಡಿ, ಅವುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು' ಎಂದು ಹೇಳಿದೆ.</p>.<p>‘ಆರೋಪಿಗೆ ಜಾಮೀನು ನೀಡಲು ಕೆಲ ಕಾಯ್ದೆಗಳು ಕಠಿಣ ನಿಬಂಧನೆಗಳನ್ನು ಹೊಂದಿವೆ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಇದು ಅಗತ್ಯವೂ ಹೌದು. ಆದರೆ, ನಿಗದಿತ ಸಮಯದೊಳಗೆ ವಿಚಾರಣೆ ಮುಗಿಯದಿದ್ದಾಗ ಆರೋಪಿಗೆ ಆಗುವ ಹಾನಿ ಅಗಾಧವಾದುದು’ ಎಂದೂ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ದೇಶದಲ್ಲಿನ ಜೈಲುಗಳಲ್ಲಿ ಅವುಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿಚಾರಣಾಧೀನ ಕೈದಿಗಳನ್ನು ಇರಿಸಲಾಗಿದೆ. ಅವರ ಸ್ಥಿತಿಯೂ ದಿಗಿಲು ಹುಟ್ಟಿಸುವಂತಿದೆ. ಹೀಗಾಗಿ, ಎಲ್ಲ ನ್ಯಾಯಾಲಯಗಳು ವಿಚಾರಣೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಪ್ರಕರಣಗಳನ್ನು ಇತ್ಯರ್ಥಗೊಳಿಸುವುದನ್ನು ಖಾತರಿಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.</p>.<p>ಒಂದು ವೇಳೆ ನ್ಯಾಯಾಲಯಗಳು ನಿಗದಿತ ಅವಧಿಯೊಳಗೆ ವಿಚಾರಣೆಯನ್ನು ಪೂರ್ಣಗೊಳಿಸದೇ ಇದ್ದಲ್ಲಿ, ವ್ಯಕ್ತಿಗೆ ಆಗಬಹುದಾದ ಹಾನಿ, ಅನ್ಯಾಯ ಅಳತೆಗೂ ಮೀರಿದ್ದಾಗಿರುತ್ತದೆ ಎಂದು ನ್ಯಾಯಮೂರ್ತಿಗಳಾದ ರವೀಂದ್ರ ಭಟ್ ಹಾಗೂ ದೀಪಂಕರ್ ದತ್ತ ಅವರಿದ್ದ ನ್ಯಾಯಪೀಠ ಹೇಳಿದೆ.</p>.<p>ಎನ್ಡಿಪಿಎಸ್ ಕಾಯ್ದೆಯಡಿ ದಾಖಲಾದ ಪ್ರಕರಣದ ಆರೋಪಿಯೊಬ್ಬರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠ ನಡೆಸಿತು. ಅರ್ಜಿದಾರ ಏಳು ವರ್ಷ ಹಾಗೂ ನಾಲ್ಕು ತಿಂಗಳುಗಳಿಂದ ಕಸ್ಟಡಿಯಲ್ಲಿದ್ದಾರೆ. ಹೀಗಾಗಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ನ್ಯಾಯಪೀಠ ಆದೇಶಿಸಿತು.</p>.<p>‘ಆರೋಪಿಯು ಒಂದು ವೇಳೆ ಆರ್ಥಿಕವಾಗಿ ದುರ್ಬಲ ಸ್ತರಕ್ಕೆ ಸೇರಿದ್ದಲ್ಲಿ, ಕಾರಾಗೃಹವಾಸದಿಂದ ಆತನಿಗೆ ಆಗುವ ಹಾನಿ ಅಗಾಧವಾಗಿರುತ್ತದೆ. ಆರೋಪಿಯು ತಕ್ಷಣಕ್ಕೆ ಜೀವನೋಪಾಯ ಕಳೆದುಕೊಳ್ಳುತ್ತಾನೆ. ಹಲವು ಪ್ರಕರಣಗಳಲ್ಲಿ, ಆರೋಪಿಗಳ ಕುಟುಂಬಗಳು ಚದುರಿಹೋಗುತ್ತವೆ. ಕೌಟುಂಬಿಕ ಬಾಂಧವ್ಯ ಛಿದ್ರಗೊಳ್ಳುವ ಜೊತೆಗೆ ಸಮಾಜದಿಂದ ಬೇರ್ಪಡುತ್ತವೆ’ ಎಂದು ನ್ಯಾಯಪೀಠ ಹೇಳಿದೆ.</p>.<p>‘ಇಂಥ ಸಂಗತಿಗಳ ಬಗ್ಗೆ ನ್ಯಾಯಾಲಯಗಳು ಹೆಚ್ಚು ಸಂವೇದನಾಶೀಲವಾಗಿರಬೇಕು. ಅದರಲ್ಲೂ, ಕಠಿಣ ನಿಯಮಗಳನ್ನು ಒಳಗೊಂಡಿರುವ ಕಾಯ್ದೆಗಳಡಿ ದಾಖಲಾದ ಪ್ರಕರಣಗಳ ವಿಚಾರಣೆಗೆ ವೇಗ ನೀಡಿ, ಅವುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು' ಎಂದು ಹೇಳಿದೆ.</p>.<p>‘ಆರೋಪಿಗೆ ಜಾಮೀನು ನೀಡಲು ಕೆಲ ಕಾಯ್ದೆಗಳು ಕಠಿಣ ನಿಬಂಧನೆಗಳನ್ನು ಹೊಂದಿವೆ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಇದು ಅಗತ್ಯವೂ ಹೌದು. ಆದರೆ, ನಿಗದಿತ ಸಮಯದೊಳಗೆ ವಿಚಾರಣೆ ಮುಗಿಯದಿದ್ದಾಗ ಆರೋಪಿಗೆ ಆಗುವ ಹಾನಿ ಅಗಾಧವಾದುದು’ ಎಂದೂ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>