ಪ್ರಿಯಾ ಅವರ ನೇಮಕಾತಿಗೆ ತಡೆಯೊಡ್ಡಿದ್ದನ್ನು ಸಮರ್ಥಿಸಿರುವ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸತೀಶನ್ ಅವರು, ಕಣ್ಣೂರು ವಿ.ವಿಯಿಂದ ನಡೆಯುತ್ತಿದ್ದ ಅಕ್ರಮ ನೇಮಕಾತಿಯನ್ನು ತಮ್ಮ ಅಧಿಕಾರ ಬಳಸಿ ರಾಜ್ಯಪಾಲರು ತಡೆದಿದ್ದಾರೆ. ರಾಜ್ಯದ ಇತರ ವಿ.ವಿಗಳಲ್ಲೂ ತಮ್ಮ ಸಂಬಂಧಿಗಳಿಗೆ ಉದ್ಯೋಗ ದೊರಕಿಸಲುಆಡಳಿತಾರೂಢ ಪಕ್ಷದ ನಾಯಕರು ಇದೇ ರೀತಿಯ ಅಕ್ರಮ ಎಸಗಿರಬಹುದು. ಹಾಗಾಗಿ, ರಾಜ್ಯದಾದ್ಯಂತ ಎಲ್ಲಾ ವಿ.ವಿಗಳಲ್ಲೂ ನೇಮಕಾತಿ ಕುರಿತು ತನಿಖೆ ನಡೆಸಲು ರಾಜ್ಯಪಾಲರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.