ನವದೆಹಲಿ: ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ತನ್ನ ಪಡೆಯ ವೀರ ಹುತಾತ್ಮ, ಧೈರ್ಯಶಾಲಿ 13 ಯೋಧರ ಸಾಹಸ ಕುರಿತಾದ ‘ದಿ ಶೌರ್ಯ ಅನ್ಬಾಂಡ್’ ಎಂಬ ಕೃತಿಯನ್ನು ಹೊರತಂದಿದೆ. ಈ ವಿಶೇಷ ಕೃತಿಯು 2001ರಲ್ಲಿ ಸಂಸತ್ ಭವನ ದಾಳಿ ವೇಳೆ ಹುತಾತ್ಮರಾದ ಕಮಲೇಶ್ ಕುಮಾರಿ ಅವರ ಜೀವನಗಾಥೆಯನ್ನೂ ಒಳಗೊಂಡಿದೆ.