<p><strong>ನವದೆಹಲಿ:</strong> ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸಿದ 21 ಬೈಕ್ ಆಂಬುಲೆನ್ಸ್ಗಳನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (ಸಿಆರ್ಪಿಎಫ್) ಸೋಮವಾರ ಹಸ್ತಾಂತರಿಸಲಾಯಿತು.</p>.<p>ನಕ್ಸಲ್ ಪೀಡಿತ ಮತ್ತು ಹಿಂಸಾಚಾರ ಪ್ರದೇಶಗಳಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ಒದಗಿಸಲು ಮತ್ತು ಆಸ್ಪತ್ರೆಗೆ ದಾಖಲಿಸಲು ಈ ಬೈಕ್ ಆಂಬುಲೆನ್ಸ್ಗಳನ್ನು ಬಳಸಲು ಉದ್ದೇಶಿಸಲಾಗಿದೆ.</p>.<p>‘ರಕ್ಷಿತಾ’ ಹೆಸರಿನಲ್ಲಿ 350 ಸಿಸಿ ರಾಯಲ್ ಎನ್ಫಿಲ್ಡ್ ಕ್ಲಾಸಿಕ್ ಬೈಕ್ನಲ್ಲಿ ಡಿಆರ್ಡಿಒದ ವೈಜ್ಞಾನಿಕ ಸಂಶೋಧನೆಗೆ ಸಂಬಂಧಿಸಿದ ‘ಅಣು ವೈದ್ಯಕೀಯ ಮತ್ತು ಸಂಬಂಧಿತ ವಿಜ್ಞಾನಗಳ ಸಂಸ್ಥೆ’ (ಐಎನ್ಎಂಎಎಸ್) ಈ ಆಂಬುಲೆನ್ಸ್ಗಳನ್ನು ಅಭಿವೃದ್ಧಿಪಡಿಸಿದೆ.</p>.<p>ಸಿಆರ್ಪಿಎಫ್ ನಿಯೋಜಿಸಿರುವ ಸ್ಥಳದಲ್ಲೂ ಸ್ಥಳೀಯರಿಗೆ ನೆರವಾಗಲು ಸಹ ಈ ಬೈಕ್ ಆಂಬುಲೆನ್ಸ್ಗಳನ್ನು ಬಳಸಲಾಗುವುದು ಎಂದು ಸಿಆರ್ಪಿಎಫ್ ಮುಖ್ಯಸ್ಥ ಎ.ಪಿ. ಮಹೇಶ್ವರಿ ತಿಳಿಸಿದ್ದಾರೆ.</p>.<p>ಈ ಯೋಜನೆಗೆ ₹35.49 ಲಕ್ಷ ವೆಚ್ಚ ಮಾಡಲಾಗಿದೆ. ಬೈಕ್ ಆಂಬುಲೆನ್ಸ್ನಲ್ಲಿ ಅಮ್ಲಜನಕದ ಕಿಟ್ ಅಳವಡಿಸಲಾಗಿದೆ ಎಂದು ಸಿಆರ್ಪಿಎಫ್ ವಕ್ತಾರರು ತಿಳಿಸಿದ್ದಾರೆ.</p>.<p>ಇದನ್ನೂ ಓದಿ:<a href="https://www.prajavani.net/india-news/balakot-whatsapp-chat-leak-797287.html" itemprop="url">‘ಬಾಲಾಕೋಟ್ ದಾಳಿ ಮಾಹಿತಿಯು ಪಾಕಿಸ್ತಾನಕ್ಕೂ ಸೋರಿಕೆಯಾಗಿತ್ತೇ’ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸಿದ 21 ಬೈಕ್ ಆಂಬುಲೆನ್ಸ್ಗಳನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (ಸಿಆರ್ಪಿಎಫ್) ಸೋಮವಾರ ಹಸ್ತಾಂತರಿಸಲಾಯಿತು.</p>.<p>ನಕ್ಸಲ್ ಪೀಡಿತ ಮತ್ತು ಹಿಂಸಾಚಾರ ಪ್ರದೇಶಗಳಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ಒದಗಿಸಲು ಮತ್ತು ಆಸ್ಪತ್ರೆಗೆ ದಾಖಲಿಸಲು ಈ ಬೈಕ್ ಆಂಬುಲೆನ್ಸ್ಗಳನ್ನು ಬಳಸಲು ಉದ್ದೇಶಿಸಲಾಗಿದೆ.</p>.<p>‘ರಕ್ಷಿತಾ’ ಹೆಸರಿನಲ್ಲಿ 350 ಸಿಸಿ ರಾಯಲ್ ಎನ್ಫಿಲ್ಡ್ ಕ್ಲಾಸಿಕ್ ಬೈಕ್ನಲ್ಲಿ ಡಿಆರ್ಡಿಒದ ವೈಜ್ಞಾನಿಕ ಸಂಶೋಧನೆಗೆ ಸಂಬಂಧಿಸಿದ ‘ಅಣು ವೈದ್ಯಕೀಯ ಮತ್ತು ಸಂಬಂಧಿತ ವಿಜ್ಞಾನಗಳ ಸಂಸ್ಥೆ’ (ಐಎನ್ಎಂಎಎಸ್) ಈ ಆಂಬುಲೆನ್ಸ್ಗಳನ್ನು ಅಭಿವೃದ್ಧಿಪಡಿಸಿದೆ.</p>.<p>ಸಿಆರ್ಪಿಎಫ್ ನಿಯೋಜಿಸಿರುವ ಸ್ಥಳದಲ್ಲೂ ಸ್ಥಳೀಯರಿಗೆ ನೆರವಾಗಲು ಸಹ ಈ ಬೈಕ್ ಆಂಬುಲೆನ್ಸ್ಗಳನ್ನು ಬಳಸಲಾಗುವುದು ಎಂದು ಸಿಆರ್ಪಿಎಫ್ ಮುಖ್ಯಸ್ಥ ಎ.ಪಿ. ಮಹೇಶ್ವರಿ ತಿಳಿಸಿದ್ದಾರೆ.</p>.<p>ಈ ಯೋಜನೆಗೆ ₹35.49 ಲಕ್ಷ ವೆಚ್ಚ ಮಾಡಲಾಗಿದೆ. ಬೈಕ್ ಆಂಬುಲೆನ್ಸ್ನಲ್ಲಿ ಅಮ್ಲಜನಕದ ಕಿಟ್ ಅಳವಡಿಸಲಾಗಿದೆ ಎಂದು ಸಿಆರ್ಪಿಎಫ್ ವಕ್ತಾರರು ತಿಳಿಸಿದ್ದಾರೆ.</p>.<p>ಇದನ್ನೂ ಓದಿ:<a href="https://www.prajavani.net/india-news/balakot-whatsapp-chat-leak-797287.html" itemprop="url">‘ಬಾಲಾಕೋಟ್ ದಾಳಿ ಮಾಹಿತಿಯು ಪಾಕಿಸ್ತಾನಕ್ಕೂ ಸೋರಿಕೆಯಾಗಿತ್ತೇ’ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>