<p class="title">ನವದೆಹಲಿ (ಪಿಟಿಐ):ದೆಹಲಿಯ ಕುತುಬ್ ಮಿನಾರ್ ಸಂಕೀರ್ಣದಲ್ಲಿ ಪತ್ತೆಯಾದ ಹಿಂದೂ ಮತ್ತು ಜೈನ ವಿಗ್ರಹಗಳ ಪರಿಶೀಲನೆ (ಐಕೋನಗ್ರಫಿ) ನಡೆಸಲಾಗುವುದು ಸಂಸ್ಕೃತಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.</p>.<p>ಸ್ಥಳದ ಉತ್ಖನನ ಮಾಡುವ ಅಥವಾ ಯಾವುದೇ ಧಾರ್ಮಿಕ ಆಚರಣೆ ನಿಲ್ಲಿಸುವ ಯೋಜನೆ ಇಲ್ಲ ಎಂದು ಅವರು ತಿಳಿಸಿದ್ದಾರೆ.</p>.<p class="title">ಕುತುಬ್ ಮಿನಾರ್ ಪಕ್ಕದ ಕುವ್ವಾತ್ ಉಲ್ ಇಸ್ಲಾಂ ಮಸೀದಿಯಲ್ಲಿ ಕಂಡುಬರುವ ಎರಡು ಗಣೇಶನ ವಿಗ್ರಹಗಳನ್ನು ಸಂಕೀರ್ಣದಿಂದ ಹೊರಕ್ಕೆ ಸ್ಥಳಾಂತರಿಸುವಂತೆ ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರದ ಅಧ್ಯಕ್ಷ ತರುಣ್ ವಿಜಯ್ ಅವರುಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್ಐ) ಪತ್ರ ಬರೆದ ಕೆಲವು ದಿನಗಳ ನಂತರ, ಈ ಅಭಿಪ್ರಾಯ ಸಂಸ್ಕೃತಿ ಸಚಿವಾಲಯದ ಅಧಿಕಾರಿಯಿಂದ ವ್ಯಕ್ತವಾಗಿದೆ.</p>.<p>ದೇವಾಲಯಗಳ ಕಲ್ಲುಗಳಿಂದ ಮಸೀದಿ ನಿರ್ಮಿಸಿರುವುದರಿಂದ, ಅಂತಹ ವಿಗ್ರಹಗಳು ಸುತ್ತಲೂ ಕಾಣಬಹುದಾಗಿದೆ. ಸದ್ಯಕ್ಕೆ ಆ ವಿಗ್ರಹಗಳನ್ನು ಪುನರ್ ಪ್ರತಿಷ್ಠಾಪಿಸುವಅಥವಾ ಬೇರೆಡೆ ಸ್ಥಳಾಂತರಿಸುವ ಯೋಜನೆ ಇಲ್ಲ. ಆದರೆ, ಆ ವಿಗ್ರಹಗಳನ್ನು ಸಂರಕ್ಷಿಸಿ, ಪ್ರದರ್ಶನಕ್ಕಿಡುವ ಉದ್ದೇಶ ಪರಿಶೀಲನೆಯಲ್ಲಿದೆ ಎಂದು ಅವರು ಹೇಳಿದರು.</p>.<p>ಕುತುಬ್ ಮಿನಾರ್ ಸಂಕೀರ್ಣದಲ್ಲಿ ಉತ್ಖನನ ನಡೆಸಲು ಸಚಿವಾಲಯವು ಎಎಸ್ಐಗೆ ಆದೇಶ ನೀಡಿದೆ ಎಂಬ ವರದಿಗಳಿಂದ ವಿವಾದ ಭುಗಿಲೆದ್ದಿದೆ. ಸಂಸ್ಕೃತಿ ಸಚಿವ ಜಿ.ಕಿಶನ್ ರೆಡ್ಡಿ ಅವರು ಈ ವರದಿ ನಿರಾಕರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title">ನವದೆಹಲಿ (ಪಿಟಿಐ):ದೆಹಲಿಯ ಕುತುಬ್ ಮಿನಾರ್ ಸಂಕೀರ್ಣದಲ್ಲಿ ಪತ್ತೆಯಾದ ಹಿಂದೂ ಮತ್ತು ಜೈನ ವಿಗ್ರಹಗಳ ಪರಿಶೀಲನೆ (ಐಕೋನಗ್ರಫಿ) ನಡೆಸಲಾಗುವುದು ಸಂಸ್ಕೃತಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.</p>.<p>ಸ್ಥಳದ ಉತ್ಖನನ ಮಾಡುವ ಅಥವಾ ಯಾವುದೇ ಧಾರ್ಮಿಕ ಆಚರಣೆ ನಿಲ್ಲಿಸುವ ಯೋಜನೆ ಇಲ್ಲ ಎಂದು ಅವರು ತಿಳಿಸಿದ್ದಾರೆ.</p>.<p class="title">ಕುತುಬ್ ಮಿನಾರ್ ಪಕ್ಕದ ಕುವ್ವಾತ್ ಉಲ್ ಇಸ್ಲಾಂ ಮಸೀದಿಯಲ್ಲಿ ಕಂಡುಬರುವ ಎರಡು ಗಣೇಶನ ವಿಗ್ರಹಗಳನ್ನು ಸಂಕೀರ್ಣದಿಂದ ಹೊರಕ್ಕೆ ಸ್ಥಳಾಂತರಿಸುವಂತೆ ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರದ ಅಧ್ಯಕ್ಷ ತರುಣ್ ವಿಜಯ್ ಅವರುಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್ಐ) ಪತ್ರ ಬರೆದ ಕೆಲವು ದಿನಗಳ ನಂತರ, ಈ ಅಭಿಪ್ರಾಯ ಸಂಸ್ಕೃತಿ ಸಚಿವಾಲಯದ ಅಧಿಕಾರಿಯಿಂದ ವ್ಯಕ್ತವಾಗಿದೆ.</p>.<p>ದೇವಾಲಯಗಳ ಕಲ್ಲುಗಳಿಂದ ಮಸೀದಿ ನಿರ್ಮಿಸಿರುವುದರಿಂದ, ಅಂತಹ ವಿಗ್ರಹಗಳು ಸುತ್ತಲೂ ಕಾಣಬಹುದಾಗಿದೆ. ಸದ್ಯಕ್ಕೆ ಆ ವಿಗ್ರಹಗಳನ್ನು ಪುನರ್ ಪ್ರತಿಷ್ಠಾಪಿಸುವಅಥವಾ ಬೇರೆಡೆ ಸ್ಥಳಾಂತರಿಸುವ ಯೋಜನೆ ಇಲ್ಲ. ಆದರೆ, ಆ ವಿಗ್ರಹಗಳನ್ನು ಸಂರಕ್ಷಿಸಿ, ಪ್ರದರ್ಶನಕ್ಕಿಡುವ ಉದ್ದೇಶ ಪರಿಶೀಲನೆಯಲ್ಲಿದೆ ಎಂದು ಅವರು ಹೇಳಿದರು.</p>.<p>ಕುತುಬ್ ಮಿನಾರ್ ಸಂಕೀರ್ಣದಲ್ಲಿ ಉತ್ಖನನ ನಡೆಸಲು ಸಚಿವಾಲಯವು ಎಎಸ್ಐಗೆ ಆದೇಶ ನೀಡಿದೆ ಎಂಬ ವರದಿಗಳಿಂದ ವಿವಾದ ಭುಗಿಲೆದ್ದಿದೆ. ಸಂಸ್ಕೃತಿ ಸಚಿವ ಜಿ.ಕಿಶನ್ ರೆಡ್ಡಿ ಅವರು ಈ ವರದಿ ನಿರಾಕರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>