‘ಇಲ್ಲಿನ ಜಮೀನಿನಲ್ಲಿ ಸಾಗುವಳಿ ಮಾಡಲು ಸರ್ಕಾರವೇ ನಮಗೆ ಅನುಮತಿ ನೀಡಿತ್ತು. ಅನೇಕ ವರ್ಷಗಳಿಂದ ಇಲ್ಲಿನ ಗೋಡಂಬಿ ತೋಟಗಳಲ್ಲಿ ನಾವು ಸಾಗುವಳಿ ಮಾಡುತ್ತಿದ್ದೇವೆ. ಇದೀಗ ಸರ್ಕಾರ ಇಲ್ಲಿನ ತೋಟಗಳನ್ನು ಜೆಸಿಬಿ ಬಳಸಿ ನೆಲಸಮಗೊಳಿಸಿ, ಗ್ರಾನೈಟ್ ಗಣಿಕಂಪನಿಯೊಂದಕ್ಕೆ ನೀಡಲು ಮುಂದಾಗಿದೆ. ಸರ್ಕಾರವು ನಮ್ಮ ಮನವಿ ಆಲಿಸದಿದ್ದಲ್ಲಿ ನಮಗೆ ಸಾವೇ ಗತಿ’ ಎಂದು ಪ್ರತಿಭಟನನಿರತ ಮಹಿಳೆಯರು ಹೇಳಿದರು.