ನವದೆಹಲಿ: ಟ್ರ್ಯಾಕ್ಟರ್ ರ್ಯಾಲಿ ಸಂದರ್ಭ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿ ಇದೇ ಮೊದಲ ಬಾರಿಗೆ ಕೇಂದ್ರ ಪ್ರತಿಕ್ರಿಯೆ ನೀಡಿದೆ. ರೈತರ ಚಳವಳಿಯನ್ನು ಪ್ರಚೋದಿಸಲು ಕಾಂಗ್ರೆಸ್ ನಿರಂತರವಾಗಿ ಯತ್ನಿಸಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಆರೋಪಿಸಿದ್ದಾರೆ.
26ರಂದು ನಡೆಯಲಿರುವುದು ಅಂತಿಮ ಪಂದ್ಯ ಎಂದು ಕೆಲವು ರೈತ ನಾಯಕರು ಹೇಳಿದ್ದರಿಂದ, ಪಂಜಾಬ್ ಸರ್ಕಾರವು ರಾಜ್ಯದಿಂದ ಹೊರಡುವ ಟ್ರ್ಯಾಕ್ಟರ್ಗಳ ಮೇಲೆ ನಿಗಾ ಇಡಬೇಕಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಅಪರಾಧಿಗಳನ್ನು ವಶಕ್ಕೆ ಪಡೆದುಕೊಳ್ಳಬೇಕಾಗಿತ್ತು ಎಂದು ಜಾವಡೇಕರ್ ಹೇಳಿದ್ದಾರೆ.
ದೆಹಲಿಯಲ್ಲಿ ಮಂಗಳವಾರ ನಡೆದ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಬೇಕಿದೆ. ಘಟನೆಯಲ್ಲಿ ಶಾಮೀಲಾದವರೆಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜಕ್ಕಾದ ಅವಮಾನವನ್ನು ಭಾರತ ಸಹಿಸುವುದಿಲ್ಲ ಎಂದೂ ಅವರುಹೇಳಿದ್ದಾರೆ.
Congress constantly tried to instigate farmers' agitation. When some farmer leaders had said on 26th that it's final match, then Punjab govt should have monitored the tractors leaving from the state & made preventive arrests of habitual criminals: Union Minister Prakash Javadekar https://t.co/wPaN54aXYA