<p class="title"><strong>ತಿರುವನಂತಪುರ: </strong>ದೇವಸ್ಥಾನದ ಕೋಣೆಗಳಲ್ಲಿ ಒಂದು ಲಕ್ಷ ಕೋಟಿ ಮೌಲ್ಯದ ಹೇರಳ ಸಂಪತ್ತನ್ನು ಹೊಂದಿದ್ದ ಕೇರಳದ ಶ್ರೀ ಅನಂತಪದ್ಮನಾಭ ಸ್ವಾಮಿ ದೇಗುಲವು ಶ್ರೀಮಂತ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಆದರೆ ದೇವಸ್ಥಾನವು ಈಚೆಗೆ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವುದಾಗಿ ಹೇಳಿದ್ದು ರಾಜ್ಯ ಸರ್ಕಾರದಿಂದ ಹಣಕಾಸಿನ ನೆರವು ಕೋರಿದೆ.</p>.<p class="title">ದೇವಸ್ಥಾನದ ಆಡಳಿತವು ರಾಜ್ಯ ಸರ್ಕಾರಕ್ಕೆ ₹52 ಕೋಟಿಯ ನೆರವು ಕೋರಿವೆ. ಆದರೆ ಸರ್ಕಾರವು ಇದುವರೆಗೆ ಕೇವಲ ಸಾಲದ ರೂಪದಲ್ಲಿ ₹ 2 ಕೋಟಿ ನೀಡಿದೆ. ಹೆಚ್ಚಿನ ನೆರವಿಗಾಗಿ ವಿವಿಧ ಹಿಂದೂ ಸಂಘಟನೆಗಳು ಕೇರಳ ಸರ್ಕಾರವನ್ನು ಒತ್ತಾಯಿಸಲು ಪ್ರಯತ್ನಿಸುತ್ತಿವೆ.</p>.<p class="title">ಸರ್ಕಾರವು ಈಗಾಗಲೇ ಮೊತ್ತವನ್ನು ಜಮಾ ಮಾಡಿದೆ. ಈಗ ಈ ವಿಷಯದ ಬಗ್ಗೆ ಮುಂದಿನ ನಿರ್ಧಾರಗಳನ್ನು ದೇವಾಲಯದ ಟ್ರಸ್ಟ್ ತೆಗೆದುಕೊಳ್ಳುತ್ತದೆ ಎಂದು ದೇವಾಲಯದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="title">ಕೋವಿಡ್ನಿಂದ ಅನಂತಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಆರ್ಥಿಕ ಸಂಕಷ್ಟ ಉಂಟಾಗಿದೆ. ಸುಮಾರು 200 ಉದ್ಯೋಗಿಗಳ ವೇತನ ಮತ್ತು ಇತರ ಧಾರ್ಮಿಕ ವಿಧಿ ವಿಧಾನಗಳ ಖರ್ಚು ವೆಚ್ಚ ನಿರ್ವಹಿಸಲು ಪ್ರತಿ ತಿಂಗಳು ದೇವಾಲಯಕ್ಕೆ ₹1.25 ಕೋಟಿ ಅಗತ್ಯವಿದೆ. ಆದರೆ ಕೋವಿಡ್ನಿಂದ ದೇವಸ್ಥಾನದ ತಿಂಗಳ ಆದಾಯದಲ್ಲಿ ಇಳಿಕೆಯಾಗಿದೆ. ಕೋವಿಡ್ನಿಂದ ಹಲವಾರು ತಿಂಗಳುಗಳ ಕಾಲ ದೇವಾಲಯವು ಭಕ್ತರಿಗೆ ಮುಚ್ಚಲ್ಪಟ್ಟಿತ್ತು. ಆದ್ದರಿಂದ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯು ಕೆಲವು ತಿಂಗಳ ಹಿಂದೆ ₹52 ಕೋಟಿ ಆರ್ಥಿಕ ನೆರವು ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು.</p>.<p class="title">ಕಳೆದ ಎರಡು ತಿಂಗಳು ಶಬರಿಮಲೆ ಯಾತ್ರೆಯ ಮಾಸದ ಸಂದರ್ಭದಲ್ಲಿ ಅಪಾರ ಭಕ್ತರ ಭೇಟಿಯಿಂದ ದೇವಸ್ಥಾನದ ಆದಾಯದಲ್ಲಿ ಗಣನೀಯ ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ. ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ವಿವಿಧ ರಾಜ್ಯಗಳಿಂದ ಬಂದ ಭಕ್ತರು ಅನಂತಪದ್ಮನಾಭ ದೇವಾಲಯಕ್ಕೂ ಭೇಟಿ ನೀಡಿದ್ದಾರೆ.ಆದರೆ ಶಬರಿಮಲೆ ಯಾತ್ರೆಯು ಈ ವಾರ ಕೊನೆಗೊಳ್ಳುತ್ತದೆ. ಕೋವಿಡ್ ಸನ್ನಿವೇಶದ ಹದಗೆಟ್ಟ ಪರಿಸ್ಥಿತಿಯಿಂದ ಮತ್ತೆ ಭಕ್ತರ ಸಂಖ್ಯೆ ಕ್ಷೀಣಿಸಬಹುದು ಎಂದು ದೇವಾಲಯದ ಅಧಿಕಾರಿಗಳು ಕಳವಳಗೊಂಡಿದ್ದಾರೆ.</p>.<p class="bodytext">ದೇವಾಲಯಕ್ಕೆ ಆರ್ಥಿಕ ನೆರವಿನ ನಿರಾಕರಣೆಯನ್ನು ರಾಜಕೀಯಗೊಳಿಸಲು ಹಲವು ಹಿಂದೂ ಸಂಘಟನೆಗಳು ಪ್ರಯತ್ನಿಸುತ್ತಿವೆ. ಹಿಂದೂ ಧಾರ್ಮಿಕ ಕೇಂದ್ರಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ನಾಯಕರು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ತಿರುವನಂತಪುರ: </strong>ದೇವಸ್ಥಾನದ ಕೋಣೆಗಳಲ್ಲಿ ಒಂದು ಲಕ್ಷ ಕೋಟಿ ಮೌಲ್ಯದ ಹೇರಳ ಸಂಪತ್ತನ್ನು ಹೊಂದಿದ್ದ ಕೇರಳದ ಶ್ರೀ ಅನಂತಪದ್ಮನಾಭ ಸ್ವಾಮಿ ದೇಗುಲವು ಶ್ರೀಮಂತ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಆದರೆ ದೇವಸ್ಥಾನವು ಈಚೆಗೆ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವುದಾಗಿ ಹೇಳಿದ್ದು ರಾಜ್ಯ ಸರ್ಕಾರದಿಂದ ಹಣಕಾಸಿನ ನೆರವು ಕೋರಿದೆ.</p>.<p class="title">ದೇವಸ್ಥಾನದ ಆಡಳಿತವು ರಾಜ್ಯ ಸರ್ಕಾರಕ್ಕೆ ₹52 ಕೋಟಿಯ ನೆರವು ಕೋರಿವೆ. ಆದರೆ ಸರ್ಕಾರವು ಇದುವರೆಗೆ ಕೇವಲ ಸಾಲದ ರೂಪದಲ್ಲಿ ₹ 2 ಕೋಟಿ ನೀಡಿದೆ. ಹೆಚ್ಚಿನ ನೆರವಿಗಾಗಿ ವಿವಿಧ ಹಿಂದೂ ಸಂಘಟನೆಗಳು ಕೇರಳ ಸರ್ಕಾರವನ್ನು ಒತ್ತಾಯಿಸಲು ಪ್ರಯತ್ನಿಸುತ್ತಿವೆ.</p>.<p class="title">ಸರ್ಕಾರವು ಈಗಾಗಲೇ ಮೊತ್ತವನ್ನು ಜಮಾ ಮಾಡಿದೆ. ಈಗ ಈ ವಿಷಯದ ಬಗ್ಗೆ ಮುಂದಿನ ನಿರ್ಧಾರಗಳನ್ನು ದೇವಾಲಯದ ಟ್ರಸ್ಟ್ ತೆಗೆದುಕೊಳ್ಳುತ್ತದೆ ಎಂದು ದೇವಾಲಯದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="title">ಕೋವಿಡ್ನಿಂದ ಅನಂತಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಆರ್ಥಿಕ ಸಂಕಷ್ಟ ಉಂಟಾಗಿದೆ. ಸುಮಾರು 200 ಉದ್ಯೋಗಿಗಳ ವೇತನ ಮತ್ತು ಇತರ ಧಾರ್ಮಿಕ ವಿಧಿ ವಿಧಾನಗಳ ಖರ್ಚು ವೆಚ್ಚ ನಿರ್ವಹಿಸಲು ಪ್ರತಿ ತಿಂಗಳು ದೇವಾಲಯಕ್ಕೆ ₹1.25 ಕೋಟಿ ಅಗತ್ಯವಿದೆ. ಆದರೆ ಕೋವಿಡ್ನಿಂದ ದೇವಸ್ಥಾನದ ತಿಂಗಳ ಆದಾಯದಲ್ಲಿ ಇಳಿಕೆಯಾಗಿದೆ. ಕೋವಿಡ್ನಿಂದ ಹಲವಾರು ತಿಂಗಳುಗಳ ಕಾಲ ದೇವಾಲಯವು ಭಕ್ತರಿಗೆ ಮುಚ್ಚಲ್ಪಟ್ಟಿತ್ತು. ಆದ್ದರಿಂದ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯು ಕೆಲವು ತಿಂಗಳ ಹಿಂದೆ ₹52 ಕೋಟಿ ಆರ್ಥಿಕ ನೆರವು ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು.</p>.<p class="title">ಕಳೆದ ಎರಡು ತಿಂಗಳು ಶಬರಿಮಲೆ ಯಾತ್ರೆಯ ಮಾಸದ ಸಂದರ್ಭದಲ್ಲಿ ಅಪಾರ ಭಕ್ತರ ಭೇಟಿಯಿಂದ ದೇವಸ್ಥಾನದ ಆದಾಯದಲ್ಲಿ ಗಣನೀಯ ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ. ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ವಿವಿಧ ರಾಜ್ಯಗಳಿಂದ ಬಂದ ಭಕ್ತರು ಅನಂತಪದ್ಮನಾಭ ದೇವಾಲಯಕ್ಕೂ ಭೇಟಿ ನೀಡಿದ್ದಾರೆ.ಆದರೆ ಶಬರಿಮಲೆ ಯಾತ್ರೆಯು ಈ ವಾರ ಕೊನೆಗೊಳ್ಳುತ್ತದೆ. ಕೋವಿಡ್ ಸನ್ನಿವೇಶದ ಹದಗೆಟ್ಟ ಪರಿಸ್ಥಿತಿಯಿಂದ ಮತ್ತೆ ಭಕ್ತರ ಸಂಖ್ಯೆ ಕ್ಷೀಣಿಸಬಹುದು ಎಂದು ದೇವಾಲಯದ ಅಧಿಕಾರಿಗಳು ಕಳವಳಗೊಂಡಿದ್ದಾರೆ.</p>.<p class="bodytext">ದೇವಾಲಯಕ್ಕೆ ಆರ್ಥಿಕ ನೆರವಿನ ನಿರಾಕರಣೆಯನ್ನು ರಾಜಕೀಯಗೊಳಿಸಲು ಹಲವು ಹಿಂದೂ ಸಂಘಟನೆಗಳು ಪ್ರಯತ್ನಿಸುತ್ತಿವೆ. ಹಿಂದೂ ಧಾರ್ಮಿಕ ಕೇಂದ್ರಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ನಾಯಕರು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>