ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ‘ರಾಹುಲ್ ಅವರು ನಡೆಸುತ್ತಿರುವ ಯಾತ್ರೆಯು ಹೆಸರಿಗಷ್ಟೇ ಭಾರತ್ ಜೋಡೊ ಯಾತ್ರೆ, ಅವರ ಸಹೋದ್ಯೋಗಿಗಳು ದೇಶವನ್ನು ‘ಒಡೆಯುವ’ ಕೆಲಸ ಮಾಡುತ್ತಿದ್ದಾರೆ ಎಂಬುದು ಇಂತಹ ಹೇಳಿಕೆಗಳಿಂದ ತಿಳಿಯುತ್ತದೆ. ಇದು ನಿಜವಾಗಿಯೂ ಭಾರತ್ ತೋಡೊ ಯಾತ್ರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಸಶಸ್ತ್ರ ಪಡೆಗಳ ವಿರುದ್ಧ ಮಾತನಾಡಿದರೆ ಭಾರತವು ಸಹಿಸದು’ ಎಂದಿದ್ದಾರೆ.